ಮೀಸಲಾತಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕೊಲ್ಲಲು ಬಿಜೆಪಿ ರೆಡಿಯಾಗಿದೆ: ಜನರೇ ಎಚ್ಚರಿಕೆ ಎಂದ ಲಾಲು ಪ್ರಸಾದ್ ಯಾದವ್

16/05/2024

ಆರ್ ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಇಂದು ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ. ಕೇಸರಿ ಪಕ್ಷವು ‘ಮೀಸಲಾತಿ ಮತ್ತು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ರೆಡಿಯಾಗಿದೆ’ ಎಂದು ಆರೋಪಿಸಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಲಾಲೂ ಪ್ರಸಾದ್ ಯಾದವ್ ಅವರು ಬಿಜೆಪಿಗೆ ಮತ ಹಾಕದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

“ಪ್ರಿಯ ದೇಶವಾಸಿಗಳೇ, ಜಾಗರೂಕರಾಗಿರಿ. ನಿಮ್ಮ ಮೀಸಲಾತಿ, ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನವನ್ನು ಕೊನೆಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ದೇಶದ ಸಂವಿಧಾನ ಉಳಿಯದಿದ್ದರೆ, ದೇಶದಲ್ಲಿ ಪ್ರಜಾಪ್ರಭುತ್ವವೂ ಉಳಿಯುವುದಿಲ್ಲ. ನೀವು ದೇಶದ ಸಮಾನ ಪ್ರಜೆಗಳಾಗಿ ಉಳಿಯುವುದಿಲ್ಲ. ನೀವು ಹಕ್ಕುಗಳು, ಸಾಂವಿಧಾನಿಕ ರಕ್ಷಣೆ ಮತ್ತು ಪರಿಹಾರಗಳನ್ನು ಹೊಂದಿರುವ ನಾಗರಿಕರಾಗಿ ಉಳಿಯುವುದಿಲ್ಲ. ನೀವು ಕೆಲವೇ ಜನರ ಗುಲಾಮರಾಗಿ ಉಳಿಯುತ್ತೀರಿ” ಎಂದು ಆರ್ ಜೆಡಿ ಮುಖ್ಯಸ್ಥರು ಹೇಳಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಎನ್ ಡಿಎ ಬಣದ ಭಾಗವಾಗಿ ಆರ್ ಜೆಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಎನ್ ಡಿಎಯಲ್ಲಿ ಬಿಜೆಪಿ, ಎಲ್ಜೆಪಿ-ಆರ್ವಿ, ಜೆಡಿಯು, ಆರ್ಎಲ್ಎಂ ಮತ್ತು ಎಚ್ಎಎಂ ಸೇರಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version