10:13 AM Saturday 23 - August 2025

ಕೇಜ್ರಿವಾಲ್ ನಿವಾಸದ ನವೀಕರಣ ಪ್ರಕರಣ: ಸಿಬಿಐ ತನಿಖೆಗೆ ಗೃಹ ಸಚಿವಾಲಯ ಆದೇಶ: ದಿಲ್ಲಿ ಸಿಎಂಗೆ ಎದುರಾಯ್ತಾ ಸಂಕಷ್ಟ..?

27/09/2023

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ನವೀಕರಣಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶಿಸಿದೆ. ನಂತರ ತನಿಖಾ ಸಂಸ್ಥೆ ಈ ವಿಷಯದಲ್ಲಿ ಪ್ರಾಥಮಿಕ ವಿಚಾರಣೆಯನ್ನು (ಪಿಇ) ದಾಖಲಿಸಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಮೇ ತಿಂಗಳಲ್ಲಿ ಸಿಬಿಐ ನಿರ್ದೇಶಕರಿಗೆ ಬರೆದ ಐದು ಪುಟಗಳ ಪತ್ರದ ಆಧಾರದ ಮೇಲೆ ಈ ತನಿಖೆಗೆ ಆದೇಶಿಸಲಾಗಿದೆ.
ಮೂಲಗಳ ಪ್ರಕಾರ, ದೆಹಲಿಯ ಮುಖ್ಯ ಕಾರ್ಯದರ್ಶಿ ನಡೆಸಿದ ತನಿಖೆಯ ನಂತರ ಬೆಳಕಿಗೆ ಬಂದ ಅಕ್ರಮಗಳ ಎಲ್ಲಾ ಆಯಾಮಗಳ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ.ಈ ವಿಷಯದಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿಶೇಷ ಲೆಕ್ಕಪರಿಶೋಧನೆಗೆ ಗೃಹ ಸಚಿವಾಲಯ ಆದೇಶಿಸಿದೆ.

ಇತ್ತೀಚಿನ ಸುದ್ದಿ

Exit mobile version