10:46 AM Friday 11 - September 2026

ಕರ್ನಾಟಕದ ಉಸೇನ್ ಬೋಲ್ಡ್, ಕಂಬಳ ವೀರ ಶ್ರೀನಿವಾಸ್ ಗೌಡಗೆ ಗಾಯ

01/02/2021

ಬಂಟ್ವಾಳ: ಕರ್ನಾಟಕದ ಉಸೇನ್ ಬೋಲ್ಡ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಗೌಡ ಅವರಿಗೆ ಕಂಬಳ ಓಟದ ಸಂದರ್ಭದಲ್ಲಿ ಗಾಯವಾಗಿದ್ದು,  ಕೈ ಮತ್ತು ಎದೆಯ ಭಾಗಕ್ಕೆ  ಏಟು ತಗಲಿದೆ ಎಂದು ತಿಳಿದು ಬಂದಿದೆ.

ಈ ವರ್ಷದ ಮೊದಲ ಕಂಬಳ ಕೂಟದಲ್ಲಿಯೇ ಶ್ರೀನಿವಾಸ ಗೌಡರಿಗೆ ಏಟು ತಗಲಿದೆ. ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಓಡುತ್ತಿದ್ದ ವೇಳೆ ಆಯತಪ್ಪಿದ್ದು,  ಈ ವೇಳೆ ಅಡ್ಡಗೋಡೆಯ ಮೇಲೆ ಕೈ ಇಟ್ಟಿದ್ದಾರೆ. ಈ ವೇಳೆ ಅವರು ಬಿದ್ದಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಕಳೆದ ವರ್ಷ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದರು. ಆದರೆ ಈ ವರ್ಷದ ಆರಂಭದಲ್ಲಿಯೇ ಅವರಿಗೆ ದುರಾದೃಷ್ಟವಶಾತ್ ಏಟು ತಗಲಿದೆ.

ವರದಿಗಳ ಪ್ರಕಾರ, ಗಾಯದ ಹಿನ್ನೆಲೆಯಲ್ಲಿ ಮುಂದಿನ ಕೆಲವು ಪಂದ್ಯಗಳಲ್ಲಿ ಶ್ರೀನಿವಾಸ ಗೌಡ ಅವರು ಭಾಗವಹಿಸದಂತೆ ಸೂಚಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version