12:56 AM Thursday 21 - August 2025

‘ಮಹಾ’ ಚುನಾವಣೆ: ಮಹಾಯುತಿ ಕೂಟಕ್ಕೆ ಪ್ರಚಂಡ ಗೆಲುವು; ಸಿಎಂ ಗಾದಿ ಮೇಲೆ ಎಲ್ಲರ ಕಣ್ಣು

23/11/2024

ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಯು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು, ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್​ ಮೂರನೇ ಬಾರಿಗೆ ಸಿಎಂ ಗಾದಿ ಏರುವ ಸಾಧ್ಯತೆಗಳು ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ಜರುಗಿದರೆ, ಮಹಾರಾಷ್ಟ್ರದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿಯಲಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ: ಮರಾಠ ರಾಜಕಾರಣ, ಆ ಸಮುದಾಯದ ರಾಜಕಾರಣಿಗಳ ಹಿಡಿತ, ಆರ್‌ಎಸ್‌ಎಸ್‌ ಪ್ರಭಾವ ಇರುವ ರಾಜ್ಯದಲ್ಲಿ 54 ವರ್ಷದ ದೇವೇಂದ್ರ ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ. ಅಖಂಡ ಶಿವಸೇನೆಯ ಮನೋಹರ್ ಜೋಶಿ ಸಿಎಂ ಆದ ಮೊದಲ ಬ್ರಾಹ್ಮಣರಾಗಿದ್ದರು.

ಫಡ್ನವೀಸ್​​ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ವಿಶ್ವಾಸಾರ್ಹ ನಾಯಕ.
ಜನಸಂಘ ಮತ್ತು ನಂತರದಲ್ಲಿ ಬಿಜೆಪಿಯ ನಾಯಕರಾಗಿದ್ದ ದಿವಂಗತ ಗಂಗಾಧರ್ ಫಡ್ನವಿಸ್ ಅವರ ಪುತ್ರರಾದ ದೇವೇಂದ್ರ ಫಡ್ನವೀಸ್​ ಅವರು ಕೇಂದ್ರ ಸಚಿವ ನಿತಿನ್​ ಗಡ್ಕರಿ ರನ್ನು ‘ರಾಜಕೀಯ ಗುರು’ ಎಂದು ಸಂಭೋದಿಸುತ್ತಾರೆ..

2024 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಜಯದ ಹಳಿಗೆ ತಂದಿರುವ ಫಡ್ನವೀಸ್​​, ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ ಎಂಬದು ಎಲ್ಲರ ಕುತೂಹಲವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version