11:48 PM Thursday 21 - August 2025

ಹೈದರಾಬಾದ್ ನ ಫಾರ್ಮಾ ಸಿಟಿ ಯೋಜನೆ ರದ್ದತಿ ಹಿಂದೆ ಬಹುಕೋಟಿ ಹಗರಣ: ಕೆಟಿಆರ್ ಗಂಭೀರ ಆರೋಪ

27/09/2024

ಹೈದರಾಬಾದ್ ಫಾರ್ಮಾ ಸಿಟಿ ಯೋಜನೆಯನ್ನು ರದ್ದುಗೊಳಿಸುವ ಪ್ರಸ್ತಾಪದಲ್ಲಿ ದೊಡ್ಡ ಭೂ ಹಗರಣ ನಡೆದಿದೆ ಎಂದು ಆರೋಪಿಸಿ ಬಿಆರ್ ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅವರು ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೆಟಿಆರ್, ಫಾರ್ಮಾ ಸಿಟಿ ಯೋಜನೆಯಲ್ಲಿ ಸರ್ಕಾರವು ವಿಭಿನ್ನ ನಿಲುವುಗಳನ್ನು ತೆಗೆದುಕೊಂಡಿದೆ ಎಂದು ಹೇಳಿ ಸರ್ಕಾರವು ಸಾರ್ವಜನಿಕರಿಗೆ ಮತ್ತು ಹೈಕೋರ್ಟ್ ಎರಡನ್ನೂ ಮೋಸಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಫಾರ್ಮಾ ಸಿಟಿ ರದ್ದತಿ ಹಿಂದೆ ಸಾವಿರ ಕೋಟಿ ಭೂ ಹಗರಣವಿದೆ. ನಾವು ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತೇವೆ” ಎಂದು ಕೆಟಿಆರ್ ಹೇಳಿದ್ದಾರೆ. ಈ ಕ್ರಮವು “ಮುಖ್ಯಮಂತ್ರಿಯ ಸಹೋದರರಿಗೆ ಶತಕೋಟಿ ರೂಪಾಯಿಗಳ ಲಾಭವನ್ನು ನೀಡುವ ಪಿತೂರಿಯಾಗಿದೆ ಎಂದಿದ್ದಾರೆ.

ಒಂದು ಕಡೆ ಫಾರ್ಮಾ ಸಿಟಿ ರದ್ದುಗೊಂಡಿದೆ ಎಂದು ಅವರು ಹೇಳುತ್ತಾರೆ. ಆದರೆ ಹೈಕೋರ್ಟ್ ನಲ್ಲಿ ಅವರು ಅದನ್ನು ರದ್ದುಗೊಳಿಸಲಾಗಿಲ್ಲ ಎಂದು ಹೇಳುತ್ತಾರೆ. ಅವರು ನ್ಯಾಯಾಂಗವನ್ನು ಈ ರೀತಿ ದಾರಿತಪ್ಪಿಸಲು ಹೇಗೆ ಸಾಧ್ಯ..? ಸರ್ಕಾರದ ಪರ್ಯಾಯ ಪ್ರಸ್ತಾಪಗಳ ಕಾರ್ಯಸಾಧ್ಯತೆಯನ್ನು ಕೆಟಿಆರ್ ಪ್ರಶ್ನಿಸಿದರು. ‘ಅವರು ಫ್ಯೂಚರ್ ಸಿಟಿ, ಎಐ ಸಿಟಿ ಮತ್ತು ಫೋರ್ತ್ ಸಿಟಿ ಬಗ್ಗೆ ಮಾತನಾಡುತ್ತಾರೆ. ಇದಕ್ಕಾಗಿ ಅವರು ಒಂದು ಎಕರೆ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡಿದ್ದಾರೆಯೇ? ಯಾವುದೇ ಹೊಸ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಅವರು ಫಾರ್ಮಾ ಸಿಟಿ ಭೂಮಿಯನ್ನು ಹೇಗೆ ಮರುಬಳಕೆ ಮಾಡಬಹುದು’ ಎಂದಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version