6:08 AM Thursday 11 - December 2025

ಅಡ್ವಾಣಿ ಸಾವಿನ ಖಚಿತ ಮಾಹಿತಿಗೂ ಮುನ್ನವೇ ಶ್ರದ್ಧಾಂಜಲಿ ಸಲ್ಲಿಸಿ  ವಿ. ಸೋಮಣ್ಣ ಯಡವಟ್ಟು!

v somanna
06/07/2024

ಲಾಲ್ ಕೃಷ್ಣ ಅಡ್ವಾಣಿ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಮುನ್ನವೇ ಕೇಂದ್ರ ಸಚಿವ ವಿ.ಸೋಮಣ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಗೆ ಶೃದ್ಧಾಂಜಲಿ ಸಲ್ಲಿಸಿದ ಸೋಮಣ್ಣ ಬಹಿರಂಗ ಸಭೆಯಲ್ಲಿಯೇ ಶೃದ್ಧಾಂಜಲಿ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಆಯೋಜನೆಗೊಂಡಿದ್ದ ಅಭಿನಂದನಾ ಸಭೆಯಲ್ಲಿ ದೆಹಲಿಗೆ ಹೊರಡುವ ಕಾರಣ ನೀಡಿ ಸಭೆ ಮೊಟಕುಗೊಳಿಸಿದ ಸೋಮಣ್ಣ ಇದೀಗ ತಾನೇ ಮಾಹಿತಿ ಬಂದಿದೆ, ಅಡ್ವಾಣಿಯವರು ಸಾವನ್ನಪ್ಪಿದ್ದಾರೆ ಎಂದರು.

ನಾನು ದೆಹಲಿಗೆ ಹೋಗಬೇಕಿದೆ ಎಂದ ಸೋಮಣ್ಣ, ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವಂತೆ ಸಭೆಯಲ್ಲಿ ಸೋಮಣ್ಣ ಮನವಿ ಮಾಡಿಯೇ ಬಿಟ್ಟರು. ಸೋಮಣ್ಣಗೆ  ಗುಬ್ಬಿಯ ಬಿಜೆಪಿ–ಜೆಡಿಎಸ್ ಮುಖಂಡರು ಸಾಥ್ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version