4:04 PM Friday 11 - September 2026

ವ್ಯಾಪಾರವೂ ಇಲ್ಲ, ಆಶ್ರಯವೂ ಇಲ್ಲ | ಪುಟ್ಟ ಮಕ್ಕಳ ಜೊತೆ ದಿಕ್ಕು ಕಾಣದೇ ನಿಂತ ಅಲೆಮಾರಿಗಳು

alemari
30/05/2021

ಬೆಂಗಳೂರು: ಬಲೂನ್ ವ್ಯಾಪಾರ ಮಾಡುತ್ತಾ ಊರೂರು ಸುತ್ತುವ ಅಲೆಮಾರಿಗಳನ್ನು ಕೊರೊನಾ ಕಾಲದಲ್ಲಿಯೂ ಎಲ್ಲಿಯೂ ನಿಲ್ಲದಂತೆ ಬೆದರಿಸಿ ಓಡಿಸುತ್ತಿರುವ ಘಟನೆ ವರದಿಯಾಗಿದ್ದು, ಇದೀಗ  ಈ ಕುಟುಂಬಗಳು ಅತಂತ್ರವಾಗಿ ಅಲೆದಾಡುತ್ತಿವೆ.

ವಿಜಯನಗರದ ಟೋಲ್ ಗೇಟ್ ಮೆಟ್ರೋ ಕೆಳಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ 15 ಕುಟುಂಬಗಳನ್ನು ಪೊಲೀಸರು ನಿನ್ನೆ ರಾತ್ರಿ ಎತ್ತಂಗಡಿ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಈ ವಲಸೆ ಕಾರ್ಮಿಕರು ಇಲ್ಲಿನ  ಕಾರ್ಡ್ ರೋಡ್ ನಲ್ಲಿರುವ ದೋನಿ ಘಾಟ್ ಸಿಗ್ನಲ್ ನ ಫ್ಲೈಓವರ್ ಕೆಳಗೆ ಆಶ್ರಯ ಪಡೆಯಲು ಯತ್ನಿಸಿದ್ದಾರೆ.  ಆದರೆ ಬಿಬಿಎಂಪಿ ಅಧಿಕಾರಿಗಳು ಅಲ್ಲಿಂದಲೂ ಅವರನ್ನು  ಸ್ಥಳ ಖಾಲಿ ಮಾಡಿಸಲು ಮುಂದಾಗಿದ್ದಾರೆ. 15 ದಿನಗಳ ವರೆಗೆ ಯಾರು ಈ ಕಡೆಗೆ ಕಾಣಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಒಂದೆಡೆ ರಾಜ್ಯದಲ್ಲಿ ಮಳೆ ಕೂಡ ಸುರಿಯುತ್ತಿದೆ. ಈ ನಡುವೆ ಈ ಅಲೆಮಾರಿ ಜನರನ್ನು ಸ್ವಲ್ಪವೂ ಕರುಣೆ ಇಲ್ಲದೇ ಸುತ್ತಾಡಿಸುತ್ತಿರುವುದು ಜನರು ಕೆಂಗಣ್ಣಿಗೆ ಗುರಿಯಾಗಿದೆ. ಕೊರೊನಾದಿಂದಾಗಿ ಆದಾಯವಿಲ್ಲದೇ ಹಸಿವಿನಿಂದ ಒದ್ದಾಡುತ್ತಿರುವ ಅಮಾಯಕರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version