12:10 AM Sunday 14 - September 2025

ನೀತಿ ಸಂಹಿತೆ ಉಲ್ಲಂಘನೆ: ವಶಪಡಿಸಿಕೊಳ್ಳಲಾದ ಹಣ, ಮದ್ಯ, ಮಾದಕ ವಸ್ತುಗಳೆಷ್ಟು?

violation of code
03/04/2023

ಬೆಂಗಳೂರು: ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ  ಬಗ್ಗೆ ಮಾರ್ಚ್ 39 ರಿಂದ ಇಲ್ಲಿಯವರೆಗಿನ ಮಾಹಿತಿ ಹೀಗಿದೆ.

ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ. Rs.12,82,94,736/- ನಗದು ವಶಪಡಿಸಿಕೊಂಡಿವೆ.

ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ ರೂ. 16,02,76,775/- ಮೌಲ್ಯದ 2,78,798 ಲೀಟರ್ ಮದ್ಯ ವಶಪಡಿಸಿಕೊಂಡಿವೆ.

ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿಇಲಾಖೆಯ ಅಧಿಕಾರಿಗಳು ಸೇರಿ ರೂ. 41,26,155/- ಮೌಲ್ಯದ 79.44 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ.

ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಿಗೆ ಉಲ್ಲಂಘಿಸಿದ 305 ಪ್ರಕರಣಗಳು, 16 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ ಒಟ್ಟು 1,238 ಪ್ರಕರಣಗಳನ್ನು ದಾಖಲಿಸಿವ ಮತ್ತು 270 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು ಮತ್ತು ಪೊಲೀಸ್‌ ಅಧಿಕಾರಿಗಳು ರೂ. 6,72,96,733/- ಮೌಲ್ಯದ 13.575 ಕೆ.ಜಿ ಬಂಗಾರ,63,98,560/-ಮೌಲ್ಯದ88.763

ಬೆಳ್ಳಿಯನ್ನು ವಶಪಡಿಸಿಕೊಂಡಿವೆ.ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು ಮತ್ತು ಪೊಲೀಸ್‌ ಅಧಿಕಾರಿಗಳು ಸೇರಿ ರೂ. 10,79,92,943/- ಮೌಲ್ಯದ ಉಚಿತ ಕೊಡುಗೆ/ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿವೆ.

ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 316 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರ

ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರ 31,486 ಶಸ್ತ್ರಾಸ್ತ್ರಗಳನ್ನು ಜಮ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 07 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 1,416 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 1,869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 3554 ಜಾಮೀನು ರಹಿತ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ.

ಎಲ್ಲಾ ತಂಡಗಳು ಒಟ್ಟು ರೂ. 47,43,85,902/-ಮೌಲ್ಯದ ನಗದು ಸೇರಿದಂತೆ ಮದ ವಶಪಡಿಸಿಕೊಂಡಿವೆ. ಮಾದಕ ದ್ರವ್ಯ ಇತ್ಯಾದಿ. ವಸ್ತುಗಳನ್ನು ಸ್ಥಿರ ಕಣಾವಲು ತಂಡಗಳು ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರೂ. 29,94,550/- ನಗದು ಮತ್ತು ಆದಾಯ ತೆರಿಗೆ ಇಲಾಖೆಯು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ರೂ. 42,95,000 ನಗದು ವಶಪಡಿಸಿಕೊಂಡಿವೆ.

ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 1,047 ಕರೆಗಳಲ್ಲಿ 1,019 ಸಾರ್ವಜನಿಕರು ಮಾಹಿತಿ ಕೋರಿದ್ದಾರ, 3 ಜನರು ಪ್ರತಿಕ್ರಿಯೆ (ಫೀಡ್‌ಬ್ಯಾಕ್) ನೀಡಿದ್ದಾರೆ. 6 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 19 ಜನರು ದೂರುಗಳನ್ನು ದಾಖಲಿಸಿದ್ದಾರೆ. ಸ್ವೀಕರಿಸಿದ ಎಲ್ಲಾ 1,047 ಕರೆಗಳ ಪೋರ್ಟ್‌ನಲ್ಲಿ 362 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು ಇವುಗಳಲ್ಲಿ 140 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 1,047 ಕರೆಗಳಲ್ಲಿ 1,019 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 3 ಜನರು ಪ್ರತಿಕ್ರಿಯ (ಫೀಡ್‌ಬ್ಲ್ಯಾಕ್) ನೀಡಿದ್ದಾರೆ.

6 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 19 ಜನರು ದೂರುಗಳನ್ನು ದಾಖಲಿಸಿದ್ದಾರೆ. ಸ್ವೀಕರಿಸಿದ ಎಲ್ಲಾ 1,047 ಕರೆಗಳ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೇ ಎನ್‌ಜಿಆರ್‌ಎಸ್‌ ಪೋರ್ಟ್‌ನಲ್ಲಿ 362 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು ಇವುಗಳಲ್ಲಿ 140 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ-ವಿಜಿಲ್ ಅಪ್ಲಿಕೇಷನ್ ಮೂಲಕ 424 ದೂರು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಪ್ರಮುಖವಾದವು, ಪರವಾನಿಗೆ ಇಲ್ಲದ ಪೋಸ್ಟರ್/ಬ್ಯಾನರ್ ಅಂಟಿಸಿದ 169 ಪ್ರಕರಣಗಳು, ಹಣ ಹಂಚಿಕೆ 11, ಪಾವತಿಸಿದ ಸುದ್ದಿ 03, ಉಡುಗೊರೆ ಕೂಪನ್ ಹಂಚಿಕೆ 14, ಮದ್ಯ ಹಂಚಿಕೆ 7, ಹಾಸ್ತಿ ಹಾನಿಗೊಳಿಸಿದ 05, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ 10 ಪುಕರಣಗಳು ಸೇರಿದಂತೆ ಈ ಪೈಕಿ 216 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇಮೇಲ್ 60 ಮತ್ತು ಪತ್ರಗಳ ಮೂಲಕ 62, ಸುದ್ದಿ ಪತ್ರಿಕೆಗಳಿಂದ 6, ಟಿ.ವಿ. ಚಾನಲ್‌ಗಳಿಂದ 14 ಮತ್ತು ಸಾಮಾಜಿಕ ಜಾಲತಾಣಗಳಿಂದ 24 ಸೇರಿದಂತೆ ಒಟ್ಟು 166 ದೂರುಗಳು ಬಂದಿದ್ದು, 84 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಆನ್‌ ಲೈನ್ ವ್ಯವಸ್ಥೆ ಸುವಿಧಾ ಮೂಲಕ ವಿವಿಧ ಅನುಮತಿ ಕೋರಿ ಇವರಗೆ ಒಟ್ಟು 512 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 240 ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, 170 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 02 ಅರ್ಜಿಗಳು ಪುಗತಿಯಲ್ಲಿವ. 94 ಬಾಕಿ ಉಳಿದಿದ್ದು, 06 ಅರ್ಜಿಗಳನ್ನು ಅರ್ಜಿದಾರರ ರದ್ದುಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version