ವಿಸ್ತಾರಾ ವಿಮಾನದಲ್ಲಿ ಸಿಗರೇಟ್ ಸೇದಿದ ಭೂಪ: 51 ವರ್ಷದ ವ್ಯಕ್ತಿಯ ಬಂಧನ

09/05/2024

ಒಮಾನ್ ನ ಮಸ್ಕತ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದ ವಾಶ್ ರೂಮ್ ನಲ್ಲಿ ಸಿಗರೇಟ್ ಸೇದಿದ 51 ವರ್ಷದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಮಸ್ಕತ್ ನಿಂದ ಮುಂಬೈಗೆ ವಿಸ್ತಾರಾದ ಯುಕೆ -234 ವಿಮಾನ ಹೋಗ್ತಿತ್ತು‌.

ಬಾಲಕೃಷ್ಣ ರಾಜಯಾನ್, ಸಿಗರೇಟ್ ಸೇದಿದ ವ್ಯಕ್ತಿ.
ಪೊಲೀಸರ ಪ್ರಕಾರ, ತಮಿಳುನಾಡಿನ ಕನ್ಯಾಕುಮಾರಿ ಮೂಲದ ರಾಜಯಾನ್ ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡುತ್ತಿದ್ದರು. ಸ್ಮೋಕ್ ಡಿಟೆಕ್ಟರ್ ಸಹಾಯದಿಂದ ಪೈಲಟ್ ಇದನ್ನು ಗಮನಿಸಿ ಆನ್ಬೋರ್ಡ್ ಕ್ಯಾಬಿನ್ ಸಿಬ್ಬಂದಿಯನ್ನು ಎಚ್ಚರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಎಚ್ಚರಿಕೆ ಸ್ವೀಕರಿಸಿದ ಸಿಬ್ಬಂದಿ ಶೌಚಾಲಯವನ್ನು ಪರಿಶೀಲಿಸಿದಾಗ ವಾಶ್ ಬೇಸಿನ್ ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಸಿಬ್ಬಂದಿ ರಾಜಯಾನ್ ಅವರ ಅಶಿಸ್ತಿನ ವರ್ತನೆಯ ಬಗ್ಗೆ ಭದ್ರತಾ ಮೇಲ್ವಿಚಾರಕರಿಗೆ ಮಾಹಿತಿ ನೀಡಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version