9:37 AM Saturday 31 - January 2026

ಕೆಂಪುಕೋಟೆಯಲ್ಲಿ ತಮ್ಮ ಧ್ವಜ ಹಾರಿಸಿದ ರೈತರು | ಪೊಲೀಸರ ಗುಂಡಿಗೆ ಓರ್ವ ರೈತ ಬಲಿ

26/01/2021

ದೆಹಲಿ: ರೈತರ ಪ್ರತಿಭಟನೆ ತಾರಕಕ್ಕೇರಿದ್ದು, ಕೆಂಪು ಕೋಟೆ ಬಳಿಗೆ ತಲುಪಿದ ರೈತರು ಕೆಂಪುಕೋಟೆಯ ಬಳಿಯಲ್ಲಿ ಜಮಾಯಿಸಿದ್ದು, ತಮ್ಮ ಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸಲು ಯತ್ನಿಸಿದ್ದಾರೆ.

 

ಕೆಂಪುಕೋಟೆ ಬಳಿಯಿರುವ ಧ್ವಜಸ್ಥಂಭವನ್ನು ಏರಿದ ಪ್ರತಿಭಟನಾಕಾನೋರ್ವ ರೈತರ ಬಾವುಟವನ್ನು ಹಾರಿಸಲು ಯತ್ನಿಸಿದ್ದಾನೆ.

 

 

ಇನ್ನೂ ದೆಹಲಿ ಪೊಲೀಸರ ಗುಂಡಿಗೆ ಓರ್ವ ರೈತ ಮೃತಟ್ಟಿರುವುದಾಗಿ ಇದೀಗ ವರದಿಯಾಗಿದೆ. ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಪೊಲೀಸರ ಗುಂಡಿಗೆ ಓರ್ವ ರೈತ ಬಲಿಯಾಗಿರುವುದನ್ನು ಖಚಿತ ಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version