ಬೆಲೆ ಏರಿಕೆಯೇ ಮೋದಿ ಸರಕಾರದ ಕೊಡುಗೆ — ಬಿ.ಎಂ.ಭಟ್

belthagady
25/07/2022

ಬೆಳ್ತಂಗಡಿ; ಜನರ ನೋವನ್ನು ಅರ್ಥ ಮಾಡಿಕೊಳ್ಳದವರು ಆಡಳಿತ ನಡೆಸಲು ಅಸಮರ್ಥರು.
ಸರಕಾರದ ವೈಫಲ್ಯ ದಿನ ಬೆಳಗಾದರೆ ಅಗತ್ಯವಸ್ತುಗಳ ಬೆಲೆಗಳನ್ನು ನಿರಂತರ ಏರಿಸುವ ಬಿಜೆಪಿ ಸರಕಾರದ ನಡೆಯಿಂದ ಸಾಬೀತಾಗಿದೆ ಎಂದು ಕಾರ್ಮಿಕ ಮುಖಂಡ ಬಿ.ಎಂ ಭಟ್ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘ(ರಿ) (ಸಿಐಟಿಯು) ನೇತೃತ್ವದಲ್ಲಿ ಬೆಲೆಏರಿಕೆ ವಿರೋದಿಸಿ ಬೆಳ್ತಂಗಡಿ ಮಿನಿವಿದಾನಸೌದ ಮುಂಬಾಗ ನಡೆದ ಹೋರಾಟವನ್ನುದ್ದೇಶಿಸಿ ಮಾತಾಡುತ್ತಿದ್ದರು.

ಅಗತ್ಯವಸ್ತುಗಳ ದರ ವಿಪರೀತ ಏರುತ್ತಿರುವುದರಿಂದ ಕಂಗಾಲಾದ ಜನತೆಗೆ ಆಹಾರ ವಸ್ತುಗಳಿಗೂ ಜಿ.ಎಸ್.ಟಿ ವಿಧಿಸಿ ಇನ್ನಷ್ಟು ಬೆಲೆ ಏರಿಸಿ ಜನರ ಬದುಕಿನ ಹಕ್ಕನ್ನೇ ಕಸಿಯುವ ನರೇಂದ್ರ ಮೋದಿ ಸರಕಾರವನ್ನು ಕಿತ್ತೆಸೆಯುವುದೊಂದೇ ಉಳಿದಿರುವ ಏಕೈಕ ದಾರಿಯಾಗಿದೆ ಎಂದರು.

ಸರಕಾರದ ದುಂದು ವೆಚ್ಚ, ಭೃಷ್ಟಾಚಾರ, ಕಮೀಶನ್ ದಂಧೆಯ ತಡೆದರೆ ಸಾಕು ಭಾರತದ ಆರ್ಥಿಕ ಸಮಸ್ಯೆ ಬಗೆಹರಿಯಲು ಸಾದ್ಯವಿದೆಯಾದರೂ ಈ ದುಂದುವೆಚ್ಚ, ಕಮೀಶನ್‌ಗಳಿಗಾಗಿಯೇ ತೆರಿಗೆ ವಿದಿಸುವುದೆಂದರೆ ಇದು ಜನವಿರೋದಿ ಸರಕಾರವಲ್ಲದೆ ಮತ್ತಿನ್ನೇನು ? ಎಂದು ಅವರು ಪ್ರಶ್ನಿಸಿದರು. .

ಈ ಸಂದರ್ಭ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಉಪಾದ್ಯಕ್ಷರಾದ ಸುರೇಶ್ ಭಟ್ ಕೊಜಂಬೆ ಮಾತಾಡಿ ಬೆಲೆ ಏರಿಸಿ ಜನರ ರಕ್ತ ಹೀರುವ ಬಿಜೆಪಿ ಸರಕಾರ ದೇಶದ ಪ್ರಜೆಗಳ ತಲೆ ಮೇಲೆ ಸುಮಾರು 50 ಲಕ್ಷ ಕೋಟಿಗಿಂತಲೂ ಹೆಚ್ಚುವರಿ ಸಾಲ ಮಾಡಿ ಒಟ್ಟು ದೇಶದ ಸಾಲವನ್ನು 107 ಲಕ್ಷ ಕೋಟಿಗೆ ಏರಿಸಿದೆ ಎಂದರು. ದೇಶದ ಸೊತ್ತನ್ನೆಲ್ಲಾ ಮಾರಿ ತಿಂದು ಮುಗಿಸುತ್ತಿರು‌ವ ಇವರು ಇನ್ನು ದೇಶದ ಪ್ರಜೆಗಳನ್ನಷ್ಟೇ ಮಾರಾಟ ಮಾಡಲು ಬಾಕಿ ಎಂದರು. ಸತ್ಯ ಹೇಳುವವರನ್ನು ಕಂಡರಾಗದ ಬಿಜೆಪಿಗಳಿಗೆ ಭಯ ಪಟ್ಟು ಅನ್ಯಾಯದ ವಿರುದ್ದ ಧ್ವನಿ ಎತ್ತದೇ ಇರುವವರು ನಾವು ರೈತ ಸಂಘದವರಲ್ಲ ಎಂದರು.

ಜಯಶ್ರೀ ಸ್ವಾಗತಿಸಿ ಲೋಕೇಶ್ ಕುದ್ಯಾಡಿ ವಂದಿಸಿದರು. ಪ್ರತಿಭಟನೆಯಲ್ಲಿ ಕಮ್ಯೂನಿಸ್ಟ್ ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಕಿರಣಪ್ರಭಾ, ಕಾರ್ಮಿಕ ಮುಖಂಡರುಗಳಾದ ರಾಮಚಂದ್ರ, ಚಂದ್ರಶೇಖರ ಭಟ್, ಸುಜಾತ, ಭವ್ಯ, ಅಶ್ವಿತ, ಶ್ರೀನಿವಾಸ್ ಲ್ಯಾಲ, ಮೊದಲಾದವರು ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version