ಕೊಟ್ಟಿಗೆಹಾರ ಮಸೀದಿಯಲ್ಲಿ ಮೌಲ್ವಿ ಡೇ ಆಚರಣೆ: ಗುರುವೇ ಬದುಕಿನ ದೀಪ

ಕೊಟ್ಟಿಗೆಹಾರ: “ಗುರು ಅಂದರೆ ಕೇವಲ ಪಾಠಗಾರರಲ್ಲ; ಅವರು ಬದುಕಿಗೆ ದಾರಿದೀಪ ತೋರಿಸುವ ಮಾರ್ಗದರ್ಶಕರು,” ಎಂಬ ನುಡಿಮುತ್ತುಗಳನ್ನು ಪ್ರತಿಬಿಂಬಿಸುವಂತೆ, ಕೊಟ್ಟಿಗೆಹಾರ ಜುಮ್ಮಾ ಮಸೀದಿಯ ಮದ್ರಸಾ ಮಕ್ಕಳಿಂದ ಮೌಲ್ವಿ ಡೇ ವಿಶೇಷ ಆಚರಣೆ ಶ್ರದ್ಧಾಭರವೊಂದಿಗೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಜಿ ಟಿ.ಎ. ಖಾದರ್ ಅವರು ಮಾತನಾಡುತ್ತಾ, “ಗುರುಗಳು ಪಾಠ ಹೇಳುವವರಷ್ಟೇ ಅಲ್ಲ; ಅವರು ಮಕ್ಕಳನ್ನು ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಬದ್ಧತೆಯ ದಿಕ್ಕಿನಲ್ಲಿ ದೋರುತ್ತಾರೆ. ಗುರುಗಳು ನೀಡುವ ಪಾಠಗಳು ಪಠ್ಯಕ್ರಮದಲ್ಲದೇ ಬದುಕಿನ ಪಾಠಗಳಾಗಬೇಕು,” ಎಂದು ತಾತ್ವಿಕವಾಗಿ ಅಭಿವ್ಯಕ್ತಿಸಿದರು.
ಇಮ್ದಾನಿ ಕನ್ಯಾಣ ಉಸ್ತಾದ್ ಅವರು ಮಾತನಾಡಿ “ಗುರು–ಶಿಷ್ಯ ಪರಂಪರೆ ನಮ್ಮ ಸಂಸ್ಕೃತಿಯ ನೈತಿಕ ಆಧಾರ. ಇಂದು ಬೆಳೆದ ತಲೆಮಾರಿಗೆ ಸದ್ಭಾವನೆ, ಗೌರವ ಹಾಗೂ ಗುರುಮಹಿಮೆ ತಿಳಿಸುವ ಜವಾಬ್ದಾರಿ ಗುರುಗಳ ಮೇಲಿದೆ,” ಎಂದು ನುಡಿದರು.
ಮಸೀದಿಯ ಕಾರ್ಯದರ್ಶಿ ಹಸೇನಾ ಹಾಜಿ ಮಾತನಾಡುತ್ತಾ, “ಗುರುಗಳು ಮಕ್ಕಳಲ್ಲಿ ಬೆಳಕು ಹಚ್ಚುವ ಶಿಲ್ಪಿಗಳು. ಇಂತಹ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನಲ್ಲಿ ಗುರುಗಳ ಮೇಲಿನ ಗೌರವವನ್ನು ಗಾಢಗೊಳಿಸುತ್ತವೆ,” ಎಂಬ ಭಾವನೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳಿಂದ ಪವಿತ್ರ ಕೋರಾನ್ ಪಾಠ, ಹದೀಸ್ ಓದು ಹಾಗೂ ಗುರುಗಳಿಗೆ ನಮನ ಸಲ್ಲಿಸಿ ಪ್ರಾರ್ಥನೆ ನಡೆಯಿತು. ನಂತರ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳು ಹಾಡು, ಕವನ ಪಠಣ ಮತ್ತು ಉಪನ್ಯಾಸಗಳ ಮೂಲಕ ತಮ್ಮ ಗುರುರ ಗಳಿಗೆ ಗೌರವ ಅರ್ಪಿಸಿದರು. ಗುರುಗಳಿಗೆ ನೀಡಲಾದ ಸ್ಮರಣೀಯ ಉಡುಗೊರೆಗಳು ಭಾವಪೂರ್ಣ ಕ್ಷಣಗಳನ್ನು ಉಂಟುಮಾಡಿದವು.
ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಜಮಾತಿನ ಹಿರಿಯ ಸದಸ್ಯರಾದ ಬಾವಕ್ಕ, ಸಿದ್ದಿಕ್, ಸಾದಿಕ್, ಅಬ್ಬಾಸ್, ಸನಾವ್, ಅಶ್ರಫ್, ಸಮದ್ ಸೇರಿದಂತೆ ಹಲವು ಪೋಷಕರು ಮತ್ತು ಮಸೀದಿ ಜಮಾತಿನ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD