10:39 AM Wednesday 20 - August 2025

ರಾಹುಲ್ ಗಾಂಧಿ ಬೌನ್ಸರ್ ನಂತೆ ವರ್ತಿಸಿದ್ದಾರೆಯೇ ಹೊರತು ಎಲ್ ಒಪಿಯಂತೆ ಅಲ್ಲ: ಬಿಜೆಪಿ ಸಂಸದನಿಂದ ಟೀಕೆ

31/12/2024

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡವಳಿಕೆಯನ್ನು ಮತ್ತೊಮ್ಮೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಟೀಕಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಂತಹ ಗೌರವಾನ್ವಿತ ವ್ಯಕ್ತಿಗಳು ಇದ್ದಂತಹ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅವರು ಸೂಕ್ತವಲ್ಲ. ಬದಲು ಅವರ ನಡವಳಿಕೆಯನ್ನು ಬೌನ್ಸರ್ ಎಂದು ಕರೆದಿದ್ದಾರೆ.

ಸಂಸತ್ತಿನಲ್ಲಿ ನಡೆದ ಗಲಾಟೆಯ ನಂತರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಬೇಕಾಗಿದ್ದ ಸಾರಂಗಿ ಅವರು ಈಗ ತುಲನಾತ್ಮಕವಾಗಿ ಉತ್ತಮವಾಗಿದ್ದಾರೆ ಮತ್ತು ಡಿಸೆಂಬರ್ 28 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಡಿಸೆಂಬರ್ 19 ರಂದು ನಡೆದ ಸಂಸತ್ತಿನ ಗಲಾಟೆ ಘಟನೆಯನ್ನು ನೆನಪಿಸಿಕೊಂಡ ಸಾರಂಗಿ, “ನಾವು (ಬಿಜೆಪಿ ಸಂಸದರು) ಪ್ರವೇಶ ದ್ವಾರದ ಬಳಿ ನಿಂತು, ಅಂಬೇಡ್ಕರ್ ಅವರ ಅವಮಾನದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version