11:27 PM Friday 11 - September 2026

ಪರಸ್ಪರ ಕಾದಾಡುತ್ತಾ ಆಯಾತಪ್ಪಿ ತ್ಯಾಜ್ಯ ನೀರು ಸಂಗ್ರಹಣ ಗುಂಡಿಗೆ ಬಿದ್ದ ಗೂಳಿ

udupi
14/11/2022

ಉಡುಪಿ: ಹದಿನೈದು ಅಡಿ ಆಳದ ತ್ಯಾಜ್ಯ ನೀರು ಸಂಗ್ರಹಣ ಗುಂಡಿಯಲ್ಲಿ ಬಿದ್ದಿದ್ದ ಗೂಳಿಯನ್ನು ಅಗ್ನಿಶಾಮಕ ದಳ, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತರು ಸತತ ಮೂರು ಗಂಟೆಗಳ ಕಾರ್ಯಚರಣೆ ಮೂಲಕ ರಕ್ಷಿಸಿರುವ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ.

ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹೇಮಂತ್ ಸದಾನಂದ ಭಂಡಾರಿ ಇದ್ದರು.

ಎರಡು ಬಲಿಷ್ಠ ಗೂಳಿಗಳು ಕಾದಾಟ ನಡೆಸುತ್ತಿದ್ದವು. ಕಾದಾಟ ಮುಂದುವರಿಸುತ್ತ ಎರಡು ಗೂಳಿಗಳು ಆರ್.ಎಸ್.ಬಿ ಸಂಭಾಗಣದ ಸನಿಹ ಇರುವ ಕಂಪೌಂಡಿನ ಬಾಗಿಲು ತಳ್ಳಿಕೊಂಡು ಒಳ ಪ್ರವೇಶಿಸಿವೆ.

ಕಾದಾಟದಲ್ಲಿ ನಿಯಂತ್ರಣ ಕಳೆದುಕೊಂಡ ಗೂಳಿಯೊಂದು ಆಯಾತಪ್ಪಿ ಗುಂಡಿಗೆ ಬಿದ್ದಿದೆ. ಗೂಳಿಯ ಆಕ್ರೋಶ ತಣಿಸಲು ಅರವಳಿಕೆಯನ್ನು ಪಶುವೈದ್ಯ ಡಾ.ಪ್ರಶಾಂತ್ ಶೆಟ್ಟಿ ಅವರು ನೀಡಿದರು. ಆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗಳು ಕ್ರೇನ್ ಬಳಿಸಿಕೊಂಡು ಗೂಳಿಯನ್ನು ರಕ್ಷಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version