3:22 AM Friday 11 - September 2026

ಗಾನಿಯೋತ್ರಿ ಅರಣ್ಯದ ಬಳಿ ಪೊಲೀಸ್ ಎನ್‌ಕೌಂಟರ್: ಇಬ್ಬರು ನಕ್ಸಲರ ಹತ್ಯೆ

11/10/2024

ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಜಾರ್ಖಂಡ್ ನ ಗನಿಯೋತ್ರಿ ಅರಣ್ಯದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್ ನಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.
ನಿಷೇಧಿತ ತ್ರಿತಿಯಾ ಸಮ್ಮೇಳನ್ ಪ್ರಸ್ತುತಿ ಸಮಿತಿಯ (ಟಿಎಸ್ಪಿಸಿ) ಉಪ ವಲಯ ಕಮಾಂಡರ್ ಹರೇಂದ್ರ ಗಂಜು ಮತ್ತು ಅವರ ಸಹಚರ ಈಶ್ವರ್ ಗಂಜು, ಸಾವನ್ನಪ್ಪಿದವರು.
ಹರೇಂದ್ರ ಗಂಜು ವಿರುದ್ಧ 48 ಪ್ರಕರಣಗಳು ಬಾಕಿಯಿದ್ದರೆ, ಈಶ್ವರ್ ಗಂಜು ವಿರುದ್ಧ ಸುಮಾರು ಒಂದು ಡಜನ್ ಪ್ರಕರಣಗಳು ಬಾಕಿ ಇವೆ.

ಗೋಪಾಲ್ ಗಂಜು ಎಂದು ಗುರುತಿಸಲಾದ ಮತ್ತೊಬ್ಬ ನಕ್ಸಲೀಯನನ್ನು ಸಹ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್ ಸಮಯದಲ್ಲಿ ರಾಮದಾಸ್ ಭೋಗ್ತಾ ಮತ್ತು ನೇತಾಜಿ ಮತ್ತು ಈಶ್ವರ್ ಗಂಜು ಸೇರಿದಂತೆ ಹಲವಾರು ಉಪನಾಮಗಳಿಂದ ಕರೆಯಲ್ಪಡುವ ಗಂಜು ಸಾವನ್ನಪ್ಪಿರುವುದನ್ನು ಜಾರ್ಖಂಡ್ ಡಿಜಿಪಿ ಅನುರಾಗ್ ಗುಪ್ತಾ ದೃಢಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version