9:32 AM Saturday 12 - September 2026

“ನಾವು ನಕ್ಸಲ್ ಆಗಬೇಕಿತ್ತು, ಆಗಲಾದ್ರೂ ಸೌಲಭ್ಯ ಸಿಗ್ತಿತ್ತೋ…!” | ಹೊಳೆಕೊಡುಗೆ ಗ್ರಾಮಸ್ಥರ ನೋವಿನ ಮಾತುಗಳು

mudigere
02/07/2025

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಕ್ಸಲ್ ಪ್ರಭಾವಿತ ಪ್ರದೇಶವೆಂದು ಹಲವು ವರ್ಷಗಳಿಂದ ಗುರುತಿಸಲಾಗಿರುವ ಹಾದಿಓಣಿ ಗ್ರಾಮದ ಬುಡಕಟ್ಟು ಜನಾಂಗ ಇಂದು ಆತ್ಮವಿಲಾಪದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 40 ವರ್ಷಗಳಿಂದ ಅವರು ಭದ್ರಾ ನದಿಯನ್ನು ತೆಪ್ಪದಲ್ಲಿ ದಾಟಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

“ತೆಪ್ಪ ಇಲ್ಲದಿದ್ರೆ ಬದುಕೇ ಇಲ್ಲ” ಎಂಬ ಸಂಕಟದ ಮಾತುಗಳು, ಅವರ ದಿನನಿತ್ಯದ ಹೋರಾಟವನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಊರಿಗೆ ರಸ್ತೆ ಇಲ್ಲ, ತೂಗುಸೇತುವೆ ಇಲ್ಲ. ಆಸ್ಪತ್ರೆ, ಶಾಲೆ, ಪಾಳ್ಯ ಎಲ್ಲವೂ ನದಿಯ ಅತ್ತ ಪಾರ. ಒಂದು ತುತ್ತು ಅನ್ನವನ್ನೂ ಹೊರೆಗೆ ದಾಟಿ ತರಬೇಕಾಗುತ್ತದೆ.

ಅಂತಿಮ ಸಂಸ್ಕಾರವೂ ತೆಪ್ಪದಲ್ಲೇ:  ಕಳೆದ ವರ್ಷ ಸಾವನ್ನಪ್ಪಿದ ಅಜ್ಜನ ಅಂತಿಮ ಸಂಸ್ಕಾರಕ್ಕೆ ತೆಪ್ಪವನ್ನೇ ಶವ ಸಾಗಾಟಕ್ಕೆ ಬಳಸಬೇಕಾಯಿತು. “ಇದು 21ನೇ ಶತಮಾನವೆಂದು ನಂಬೋದು ಕಷ್ಟ” ಎನ್ನುತ್ತಾರೆ ಗ್ರಾಮದ ವೃದ್ಧರು.

ಹೆಣ್ಣುಮಕ್ಕಳ ಕಣ್ಣೀರಿನ ಅಳಲು:  “ಅವರು (ನಕ್ಸಲ್‌ಗಳು) ಅದನ್ನು ಪಥವನ್ನಾಗಿ ಆಯ್ಕೆ ಮಾಡಿದ್ರು. ನಾವು ಕೂಡ ಅದೇ ದಾರಿ ತೊಳಿದಿದ್ರೆ, ಇಂದು ಇಂಥ ಸ್ಥಿತಿ ಬರ್ತಿರಲಿಲ್ಲ” ಎಂಬ ಮಾತುಗಳು ಸ್ಥಳೀಯ ಮಹಿಳೆಯರ ಬೇಸರವನ್ನು ವ್ಯಕ್ತಪಡಿಸುತ್ತವೆ.

ಸಾಮಾಜಿಕ ನ್ಯಾಯಕ್ಕೆ ಘಾಸಿ:  ಸ್ಥಳೀಯರು ಬೆಂಬಲ ಸಿಗದಿರುವ ಸರ್ಕಾರದ ವಿರುದ್ಧ ತೀವ್ರ ಅಸಂತೋಷ ವ್ಯಕ್ತಪಡಿಸುತ್ತಿದ್ದಾರೆ. “ರಸ್ತೆ ಮಾಡಿ ಕೊಡಿ, ಇಲ್ಲ ತೂಗುಸೇತುವೆ ನಿರ್ಮಿಸಿ, ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಿ” ಎಂಬ ಆಕ್ರೋಶವು, ಮೂಲಭೂತ ಹಕ್ಕುಗಳನ್ನು ನಿರಾಕರಿಸಿರುವ ಸ್ಥಿತಿಯನ್ನು ತೋರುತ್ತದೆ.

ದೂರು ಸರ್ಕಾರದ ಗಮನಕ್ಕೆ ಬರಬೇಕಿದೆ:  ಈ ಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ, 40 ವರ್ಷಗಳಿಂದ ದಾರಿ ಇಲ್ಲದ ಬದುಕು ಮುಂದುವರೆದಿದೆ. ಸರ್ಕಾರ ಈ ಆಕ್ರೋಶದ ಧ್ವನಿಗೆ ಸ್ಪಂದಿಸಿ, ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version