3:31 AM Friday 11 - September 2026

ಚಲವಾದಿ ಸಮಾಜದ ಹಿರಿಯಜ್ಜಿ, ಶತಾಯುಷಿ ಯಲ್ಲವ್ವ ರೇವಣಪ್ಪ ಅಜಮನಿ ನಿಧನ

yallavva revanappa ajamani
04/06/2021

ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿದ್ದ ಶತಾಯುಷಿ (110 ) ಯಲ್ಲವ್ವ.ರೇವಣಪ್ಪ.ಅಜಮನಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.

ಮೃತರು ಚಲವಾದಿ ಸಮಾಜದ ಹಿರಿಯಜ್ಜಿಯಾಗಿದ್ದು ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಗಿರಿಮೊಮ್ಮಕ್ಕಳನ್ನು ಕಂಡಿದ್ದರು.

ಮೃತ ಅಜ್ಜಿಗೆ ನಾಲ್ಕು ಜನ ಹೆಣ್ಣುಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಮುದ್ದೇಬಿಹಾಳದ ನಾಲತವಾಡ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ  ಶುಕ್ರವಾರ ಮದ್ಯಾಹ್ನ 3 ಗಂಟೆಗೆ ನೆರವೇರಿಸಲಾಗುವದೆಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸೂಚನೆ :

ಹಿರಿಯ ಅಜ್ಜಿಗೆ ಚಲವಾದಿ ಸಮಾಜದ ಮುಖಂಡ ಹಾಗೂ ಪತ್ರಕರ್ತ ಸಿದ್ದು ಚಲವಾದಿ, ಸಾಹಿತಿ ಶಿವಪುತ್ರ ಅಜಮನಿ, ನಿವೃತ್ತ ಬಿಎಸ್ಎಫ್ ಯೋಧ ರೇವಣಪ್ಪ ಅಜಮನಿ, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಯಮನಪ್ಪ ಹಂಗರಗಿ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version