ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 6 ಹೊಸ ಮಸೂದೆಗಳನ್ನು ಮಂಡಿಸಲಿರುವ ಕೇಂದ್ರ ಸರ್ಕಾರ

19/07/2024

ಜುಲೈ 22 ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನು ತಿದ್ದುಪಡಿ ಮಾಡುವುದು ಸೇರಿದಂತೆ ಕೇಂದ್ರವು ಆರು ಹೊಸ ಮಸೂದೆಗಳನ್ನು ಪರಿಚಯಿಸಲಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಅವಕಾಶಗಳನ್ನು ಒದಗಿಸುವ ಅಸ್ತಿತ್ವದಲ್ಲಿರುವ ವಿಮಾನ ಕಾಯ್ದೆ 1934 ಅನ್ನು ಬದಲಿಸುವ ಭಾರತೀಯ ವಾಯುಯಾನ್ ವಿಧೇಯಕ್ 2024 ಅನ್ನು ಸರ್ಕಾರ ಪ್ರಸ್ತುತಪಡಿಸಲಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ.

ಆರು ಮಸೂದೆಗಳ ಪಟ್ಟಿ ಇಲ್ಲಿದೆ:
1. ಹಣಕಾಸು ಮಸೂದೆ
2. ವಿಪತ್ತು ನಿರ್ವಹಣಾ ಮಸೂದೆ
3. ಬಾಯ್ಲರ್ಸ್ ಬಿಲ್
4. ಭಾರತೀಯ ವಾಯುಯಾನ್ ವಿಧೇಯಕ್ ಮಸೂದೆ
5. ಕಾಫಿ (ಉತ್ತೇಜನ ಮತ್ತು ಅಭಿವೃದ್ಧಿ) ಮಸೂದೆ
6. ರಬ್ಬರ್ (ಉತ್ತೇಜನ ಮತ್ತು ಅಭಿವೃದ್ಧಿ) ಮಸೂದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು ಬಜೆಟ್ ಮಂಡಿಸಲಿದ್ದಾರೆ. ಇನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದೀಯ ಕಾರ್ಯಸೂಚಿಯನ್ನು ನಿರ್ಧರಿಸುವ ವ್ಯವಹಾರ ಸಲಹಾ ಸಮಿತಿಯನ್ನು (ಬಿಎಸಿ) ರಚಿಸಿದ್ದಾರೆ. ಈ ಸಮಿತಿಯಲ್ಲಿ ವಿವಿಧ ಪಕ್ಷಗಳ 14 ನಾಮನಿರ್ದೇಶಿತ ಸಂಸದರು ಇದ್ದಾರೆ.

ಬಿಜೆಪಿಯಿಂದ ನಿಶಿಕಾಂತ್ ದುಬೆ, ಅನುರಾಗ್ ಸಿಂಗ್ ಠಾಕೂರ್, ಭರ್ತೃಹರಿ ಮಹತಾಬ್, ಪಿ.ಪಿ.ಚೌಧರಿ, ಬೈಜಯಂತ್ ಪಾಂಡಾ ಮತ್ತು ಡಾ.ಸಂಜಯ್ ಜೈಸ್ವಾಲ್ ಸಮಿತಿಯಲ್ಲಿದ್ದಾರೆ. ಕಾಂಗ್ರೆಸ್ ನಿಂದ ಕೆ.ಸುರೇಶ್ ಮತ್ತು ಗೌರವ್ ಗೊಗೊಯ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಟಿಎಂಸಿಯನ್ನು ಸುದೀಪ್ ಬಂಡೋಪಾಧ್ಯಾಯ, ಡಿಎಂಕೆಯನ್ನು ದಯಾನಿಧಿ ಮಾರನ್ ಪ್ರತಿನಿಧಿಸಿದರೆ, ಶಿವಸೇನೆ ಯುಬಿಟಿಯನ್ನು ಅರವಿಂದ್ ಸಾವಂತ್ ಪ್ರತಿನಿಧಿಸುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version