ಮಾಲ್ದೀವ್ಸ್ ನಲ್ಲಿ ಗಡುವಿಗೂ ಮುನ್ನವೇ ಸೇನಾ ತುಕಡಿಗಳನ್ನು ತೆರವುಗೊಳಿಸಿದ ಭಾರತ: ಮುಂದೇನು..?

ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ವಿಧಿಸಿದ್ದ ಮೇ ೧೦ರ ಗಡುವಿಗೂ ಮುಂಚಿತವಾಗಿಯೇ ಭಾರತವು ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯ ವಕ್ತಾರ ತಿಳಿಸಿದ್ದಾರೆ. ದ್ವೀಪ ರಾಷ್ಟ್ರಕ್ಕೆ ಭಾರತ ನೀಡಿದ್ದ ಎರಡು ಹೆಲಿಕಾಪ್ಟರ್ ಹಾಗೂ ಡಾರ್ನಿಯರ್ ವಿಮಾನ ನಿರ್ವಹಿಸಲು ಭಾರತೀಯ ಸೇನಾ ತುಕಡಿ ಮಾಲ್ದೀವ್ಸ್ ನಲ್ಲಿ ನಿಯೋಜಿಸಲಾಗಿತ್ತು.
ಚೀನಾ ಪರ ನಾಯಕರೆಂದು ವ್ಯಾಪಕವಾಗಿ ಬಿಂಬಿಸಲ್ಪಟ್ಟಿರುವ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು, ಭಾರತವು ತಮ್ಮ ದೇಶದಿಂದ ಮೇ ೧೦ರೊಳಗೆ ತನ್ನೆಲ್ಲ ಯೋಧರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಗಡುವು ವಿಧಿಸಿದ್ದರು. ಕಳೆದ ವರ್ಷ ನಡೆದಿದ್ದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ದ್ವೀಪ ರಾಷ್ಟ್ರದಲ್ಲಿ ಬೀಡು ಬಿಟ್ಟಿರುವ ಸುಮಾರು ೯೦ ಮಂದಿ ಭಾರತೀಯ ಸೇನಾ ಸಿಬ್ಬಂದಿಗಳನ್ನು ದೇಶದಿಂದ ಹೊರಗೆ ಕಳಿಸಲಾಗುವುದು ಎಂಬುದು ಮುಯಿಝುರ ಪ್ರಮುಖ ವಾಗ್ದಾನವಾಗಿತ್ತು.
ಸನ್ ಡಾಟ್ ಎಮ್ ವಿ ಸುದ್ದಿ ಪೋರ್ಟಲ್ ನೊಂದಿಗೆ ಮಾತನಾಡಿರುವ ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್, ದೇಶದಲ್ಲಿ ಬೀಡು ಬಿಟ್ಟಿದ್ದ ಭಾರತೀಯ ಯೋಧರ ಕೊನೆಯ ತಂಡವು ದೇಶದಿಂದ ನಿರ್ಗಮಿಸಿದೆ ಎಂದು ತಿಳಿಸಿದ್ದಾರೆ.ಮಾಲ್ದೀವ್ಸ್ ನಲ್ಲಿದ್ದ ಭಾರತೀಯ ಯೋಧರ ಸಂಖ್ಯೆಯ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth