ಮೂಡಿಗೆರೆ: ಫೆ.22, 23ರಂದು ಭೂಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮಹಾಧರಣಿ

21/02/2024
ಮೂಡಿಗೆರೆ: ಭೂಸಂಘರ್ಷ ಸಮಿತಿ ಮೂಡಿಗೆರೆ ವತಿಯಿಂದ ಫೆಬ್ರವರಿ 22 ಮತ್ತು 23ರಂದು ಮೂಡಿಗೆರೆಯಲ್ಲಿ ಆಹೋರಾತ್ರಿ ಮಹಾಧರಣಿ ಹಮ್ಮಿಕೊಳ್ಳಲಾಗಿದೆ.
ಭೂ ಸಮಸ್ಯೆಗಳಾದ ಅಕ್ರಮ ಒತ್ತುವರಿ, ಅಕ್ರಮ ಭೂಮಂಜೂರಾತಿ ತನಿಖೆ ಹಾಗೂ ದಲಿತರ ಭೂಮಿ ದುರಸ್ಥಿಗೆ ಆಗ್ರಹಿಸಿ, ಈ ಆಹೋರಾತ್ರಿ ಪ್ರತಿಭಟನಾ ಮಹಾಧರಣಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಫೆಬ್ರವರಿ 22ರಂದು ರಾತ್ರಿ 7 ಗಂಟೆಗೆ ಹೈಕೋರ್ಟ್ ನ ಖ್ಯಾತ ವಕೀಲರಾದ ಬಾಲನ್ ಅವರು ಪಿಟಿಸಿಎಲ್ ಆಕ್ಟ್ ಗೆ ಸಂಬಂಧಿಸಿದಂತೆ ಮಾತನಾಡಲಿದ್ದಾರೆ.
ಈ ಹೋರಾಟವನ್ನು ದಲಿತಪರ, ಕಾರ್ಮಿಕಪರ, ಮಹಿಳಾಪರ, ವಿದ್ಯಾರ್ಥಿ ಸಂಘಟನೆಗಳು ಬೆಂಬಲಿಸಲಿವೆ ಎಂದು ಭೂಸಂಘರ್ಷ ಸಮಿತಿ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದೆ.