ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮ ದಿನ: ಅಗಲಿದ ಆರಕ್ಷಕರಿಗೆ ಪುಷ್ಪ ನಮನ

chamarajanagara
21/10/2023

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅಗಲಿದ ಆರಕ್ಷಕ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಲಾಯಿತು.

ಹುತಾತ್ಮ ಪೊಲೀಸರಿಗೆ 21 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವಿಸಲಾಯಿತು. ಈ ವೇಳೆ, ಡಿಸಿ ಶಿಲ್ಪಾನಾಗ್  ಮಾತನಾಡಿ, ಪೊಲೀಸ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ, ಗಡಿಯಲ್ಲಿ ಸೈನಿಕರು ಎಷ್ಟು ಮುಖ್ಯವೋ ನಾಡಿನಲ್ಲಿ ಪೊಲೀಸರು ಅಷ್ಟೇ ಮುಖ್ಯ, ಇಂದು ಪೊಲೀಸರ ಗೌರವವಂದನೆಯನ್ನು ಸ್ವೀಕರಿಸಲು ಬಹಳಷ್ಟು ಹೆಮ್ಮೆ ತಂದಿದೆ ಎಂದರು.

ಇತ್ತೀಚಿನ ಸುದ್ದಿ

Exit mobile version