6:41 AM Tuesday 24 - February 2026

ಶಂಕರಾಚಾರ್ಯರು ರಾಮ ಮಂದಿರ ಕಾರ್ಯಕ್ರಮದಿಂದ ದೂರ ಉಳಿದಿದ್ದಕ್ಕೆ ಪ್ರಧಾನಿ ಮೋದಿಯೇ ಕಾರಣ: ಉದಯನಿಧಿ ಸ್ಟಾಲಿನ್ ಆರೋಪ

05/02/2024

ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಇರಲು ನಿರಾಕರಿಸಿದ ಕಾರಣ ಶಂಕರಾಚಾರ್ಯರು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಹೇಳುವ ಮೂಲಕ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಸಚಿವ ಉದಯನಿಧಿ ಮಾತನಾಡಿ, “ರಾಮ ಮಂದಿರ ಉದ್ಘಾಟನೆಯಲ್ಲಿ ಯಾವುದೇ ಸ್ವಾಮಿಗಳು ಭಾಗವಹಿಸಲಿಲ್ಲ. ಮೋದಿ ಬಂದರೆ ತಾವು ಭಾಗವಹಿಸುವುದಿಲ್ಲ ಎಂದು ಶಂಕರಾಚಾರ್ಯರು ಹೇಳಿದ್ದರು. ನಾಲ್ಕು ತಿಂಗಳ ಹಿಂದೆ ನಾನು ಹೇಳಿದ್ದು ಇದನ್ನೇ. ಎಲ್ಲರೂ ಸಮಾನರು ಎಂದು ನಾನು ಹೇಳಿದ್ದೆ. ಹೀಗಾಗಿ ನನ್ನ‌ ಮೇಲೆ ಒಂದು ಪ್ರಕರಣವಿದೆ, ಆದರೆ ನಾವು ಅದನ್ನು ಎದುರಿಸುತ್ತೇವೆ. ಅವರು (ಬಿಜೆಪಿ) ನನ್ನನ್ನು ಕ್ಷಮೆಯಾಚಿಸುವಂತೆ ಕೇಳಿದರು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ನಾನು ಹೇಳಿದ್ದನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸವಾಲೆಸೆದರು.

ಹುಟ್ಟಿನಿಂದಲೇ ಎಲ್ಲರೂ ಸಮಾನರು ಮತ್ತು ಕಾನೂನು ವ್ಯವಸ್ಥೆಯನ್ನು ಗೌರವಿಸುತ್ತೇನೆ ಎಂದು ಮಾತ್ರ ಅವರು ಅರ್ಥೈಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ತಮಿಳುನಾಡಿನ ಜನರು ದೇವರನ್ನು ಪ್ರಾರ್ಥಿಸಬಹುದು. ಆದರೆ ಚುನಾವಣೆಯ ವಿಷಯಕ್ಕೆ ಬಂದಾಗ ಅವರು ಡಿಎಂಕೆಗೆ ಮತ ಚಲಾಯಿಸುತ್ತಾರೆ ಎಂದು ತಮಿಳುನಾಡು ಸಚಿವರು ಆತ್ಮವಿಶ್ವಾಸದಿಂದ ಹೇಳಿದರು.

ಇತ್ತೀಚಿನ ಸುದ್ದಿ

Exit mobile version