4:43 PM Saturday 18 - October 2025

‘ಟಿಪ್ಪು ಸುಲ್ತಾನ್ ಯಾರು?’: ಚುನಾವಣೆಯಲ್ಲಿ ಗೆದ್ದರೆ ಸುಲ್ತಾನ್ ಬತ್ತೇರಿಯನ್ನು ಮರುನಾಮಕರಣ ಮಾಡುತ್ತೇನೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

11/04/2024

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದರೆ ವಯನಾಡ್ ನ ಸುಲ್ತಾನ್ ಬತ್ತೇರಿ ಪಟ್ಟಣವನ್ನು ಗಣಪತಿವಟ್ಟಂ ಎಂದು ಮರುನಾಮಕರಣ ಮಾಡುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿಕೆ ನೀಡಿದ್ದಾರೆ.

ಐತಿಹಾಸಿಕತೆಯನ್ನು ಹೊಂದಿರುವ ಈ ಪ್ರಸ್ತಾಪವು ಪಟ್ಟಣದ ಹೆಸರನ್ನು ಅದರ ಮೂಲ ಹೆಸರು ಎನ್ನಲಾದ ಗಣಪತಿವಟ್ಟಂಗೆ ಬದಲಾಯಿಸುತ್ತೇವೆ ಎಂದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಸುರೇಂದ್ರನ್, ಟಿಪ್ಪು ಸುಲ್ತಾನ್ ಅವರ ಪರಂಪರೆಯನ್ನು ಪ್ರಶ್ನಿಸಿದ್ದರು. “ಟಿಪ್ಪು ಸುಲ್ತಾನ್ ಯಾರು..?” ಎಂದು ಕೇಳಿ ವಯನಾಡ್ ಜನರಿಗೆ ಅವರ ಪ್ರಸ್ತುತತೆಯನ್ನು ಪ್ರಶ್ನಿಸಿದ್ದರು. ಪಟ್ಟಣದ ಮೂಲ ಹೆಸರಾದ ಗಣಪತಿವಟ್ಟಂ ಅನ್ನು ಪುನಃಸ್ಥಾಪಿಸುವ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ. ಇದು ಗಣೇಶನೊಂದಿಗಿನ ಸಂಬಂಧವನ್ನು ಸಂಕೇತಿಸುತ್ತದೆ ಎಂದು ಸೂಚಿಸಿದರು.

ಸುರೇಂದ್ರನ್ ಅವರ ಪ್ರಸ್ತಾಪವು ಈ ಪ್ರದೇಶದ ಸಂಕೀರ್ಣ ಇತಿಹಾಸವನ್ನು ವಿಶೇಷವಾಗಿ ಟಿಪ್ಪು ಸುಲ್ತಾನ್ ಆಕ್ರಮಣದ ವಿರುದ್ಧ ಅದರ ಪ್ರತಿರೋಧವನ್ನು ಪರಿಶೀಲಿಸುತ್ತದೆ. ಟಿಪ್ಪು ಸುಲ್ತಾನ್ ವಯನಾಡ್ ಮತ್ತು ಮಲಬಾರ್ ನಲ್ಲಿ ಧಾರ್ಮಿಕ ದೌರ್ಜನ್ಯಗಳನ್ನು ಎಸಗಿದ್ದ. ಇದು ಹಿಂದೂಗಳ ಮತಾಂತರ ಮತ್ತು ದೇವಾಲಯಗಳ ಮೇಲೆ ದಾಳಿಗೆ ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ.

ತನ್ನ ರಾಜಕೀಯ ಪ್ರತಿಸ್ಪರ್ಧಿಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಅಲೈಯನ್ಸ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಟಿಪ್ಪು ಸುಲ್ತಾನ್ ಸಿದ್ಧಾಂತದೊಂದಿಗೆ ಮೈತ್ರಿ ಮಾಡಿಕೊಂಡಿವೆ ಮತ್ತು ಪಟ್ಟಣವನ್ನು ಸುಲ್ತಾನ್ ಬತ್ತೇರಿ ಎಂದು ಮರುನಾಮಕರಣ ಮಾಡುತ್ತಿವೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version