ಛತ್ತೀಸ್ ಗಢ ಚುನಾವಣೆ 2023: ಕಾಂಗ್ರೆಸ್ ಗೆದ್ದರೆ ರೈತರ ಸಾಲ ಮನ್ನಾ: ಭೂಪೇಶ್ ಬಾಘೇಲ್ ಭರವಸೆ

24/10/2023

ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ವಾರಗಳು ಬಾಕಿ ಇರುವಾಗ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಉಳಿಸಿಕೊಂಡರೆ ಮತ್ತೊಮ್ಮೆ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡುವ ಮೂಲಕ ರೈತರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ತನ್ನ ಅಭಿಯಾನವನ್ನು ತೀವ್ರಗೊಳಿಸುತ್ತಿದ್ದಂತೆ ಸಿಎಂ ಬಘೇಲ್ ಅವರಿಂದ ಈ ಭರವಸೆಯ ಹೇಳಿಕೆ ಬಂದಿದೆ.

“ನಾವು ಅಧಿಕಾರಕ್ಕೆ ಬಂದರೆ ಮತ್ತು ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸಿದರೆ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ” ಎಂದು ಬಘೇಲ್ ಹೇಳಿದ್ದಾರೆ. ಇದು ರಾಜ್ಯದ ಸುಮಾರು 22 ಲಕ್ಷ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಛತ್ತೀಸ್ ಗಢದಲ್ಲಿ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನಿಂದ ಇದು ನಾಲ್ಕನೇ ಖಾತರಿಯಾಗಿದೆ. ಏಕೆಂದರೆ ಪಕ್ಷವು ಈಗಾಗಲೇ ಜಾತಿ ಗಣತಿ ನಡೆಸುವುದಾಗಿ, ಎಕರೆಗೆ 20 ಕ್ವಿಂಟಾಲ್ ಭತ್ತವನ್ನು ಖರೀದಿಸುವುದಾಗಿ ಮತ್ತು ರಾಜ್ಯದ 17.5 ಲಕ್ಷ ಕುಟುಂಬಗಳಿಗೆ ವಸತಿ ಒದಗಿಸುವುದಾಗಿ ಭರವಸೆ ನೀಡಿದೆ.

ಇಂದು ನಾಲ್ಕನೇ ಘೋಷಣೆಯನ್ನು ನಮ್ಮ ರೈತರಿಗೆ ಅರ್ಪಿಸಲಾಗಿದೆ. ಇಲ್ಲಿಯವರೆಗೆ ನಾವು 4 ಪ್ರಕಟಣೆಗಳನ್ನು ಮಾಡಿದ್ದೇವೆ. ಮೊದಲಿನಂತೆ ಈ ಬಾರಿಯೂ ರೈತರ ಸಾಲ ಮನ್ನಾ ಮಾಡಲಾಗುವುದು. ಜಾತಿ ಗಣತಿ ನಡೆಸುತ್ತೇವೆ, ಎಕರೆಗೆ 20 ಕ್ವಿಂಟಾಲ್ ಭತ್ತ ಖರೀದಿಸುತ್ತೇವೆ. ನಾವು 17.5 ಲಕ್ಷ ಕುಟುಂಬಗಳಿಗೆ ವಸತಿ ಒದಗಿಸುತ್ತೇವೆ. ಜನತಾ ಕಾ ಭರೋಸಾ ಹೈ ಬರ್ಕರಾರ್. ಫಿರ್ ಸೆ ಕಾಂಗ್ರೆಸ್ ಸರ್ಕಾರ್ ಎಂದು ಬಾಘೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version