2:47 AM Tuesday 8 - September 2026

ಪತ್ನಿಯ ಮೇಲೆ ಕೋಪಗೊಂಡು ಕೊಡಲಿಯಿಂದ  ಹಲ್ಲೆ ನಡೆಸಿದ | ಬಳಿಕ ಆತ ಮಾಡಿದ ಕೆಲಸ ಏನು ಗೊತ್ತಾ?

08/03/2021

ಹುಬ್ಬಳ್ಳಿ: ಮನೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತಿಯೋರ್ವ ಪತ್ನಿಯ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದು,  ಆಕೆ ಗಂಭೀರವಾಗಿ ಗಾಯಗೊಂಡಾಗ ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಪವಿತ್ರ ಮಾದರ ಎಂಬ ಮಹಿಳೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಪತಿ ಈರಪ್ಪ  ಹಲ್ಲೆ ನಡೆಸಿದವನಾಗಿದ್ದಾನೆ.  ಈ ದಂಪತಿ ಸುಳ್ಳ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರತಿ ದಿನ ಪತಿ ಹಾಗೂ ಪತ್ನಿ ನಡುವೆ ಜಗಳವಾಗುತ್ತಿತ್ತು. ಜಗಳ ಅತಿರೇಕಕ್ಕೆ ಹೋದಾಗ ಪತಿ ತನ್ನ ಪತ್ನಿಯನ್ನು ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

ಹಲ್ಲೆಯ ಪರಿಣಾಮಪವಿತ್ರಾಗೆ ತೀವ್ರ ರಕ್ತಸ್ರಾವವಾಗಿದ್ದು, ಈ ವೇಳೆ ಪತಿ ತಾನೇ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ಹಲ್ಲೆಯ ಪರಿಣಾಮ ಪವಿತ್ರ ಅವರಿಗೆ  ಗಂಭೀರವಾಗಿ ಗಾಯವಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಈರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi
Exit mobile version