4:39 AM Wednesday 28 - January 2026

ದೆಹಲಿಯಲ್ಲಿ ವಿಷಕಾರಿ ಗಾಳಿಯ ಹಾವಳಿ: ಕೇಂದ್ರ ಪರಿಸರ ಸಚಿವರು ಎಲ್ಲಿದ್ದಾರೆ..? ಬಿಜೆಪಿ ಪಕ್ಷಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ ಎಂದು ವಾಗ್ದಾಳಿ ನಡೆಸಿದ ಎಎಪಿ

03/11/2023

ದೆಹಲಿ-ಎನ್ಸಿಆರ್ ನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಶುಕ್ರವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಕೇಂದ್ರ ಪರಿಸರ ಸಚಿವರು ಎಲ್ಲಿದ್ದಾರೆ..?” ಎಂದು ಕೇಂದ್ರ ಪರಿಸರ ಸಚಿವರಾಗಿರುವ ಭೂಪೇಂದರ್ ಯಾದವ್ ಅವರನ್ನು ಉಲ್ಲೇಖಿಸಿ ರಾಯ್ ಇಂಡಿಯಾ ಟುಡೇಯ ಸಹೋದರಿ ಚಾನೆಲ್ ಆಜ್ ತಕ್ ಗೆ ಹೇಳಿಕೆ ನೀಡಿದ್ದಾರೆ.

ದೆಹಲಿಯ ಮಾಲಿನ್ಯವು ನೆರೆಯ ರಾಜ್ಯಗಳಿಂದ ಗರಿಷ್ಠ ಮಾಲಿನ್ಯಕಾರಕಗಳನ್ನು ಹೊಂದಿದೆ. ಆದರೆ ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರವು ಇದನ್ನು ಪರಿಹರಿಸಲು ತುರ್ತು ಸಭೆಗಳನ್ನು ನಡೆಸಬೇಕು” ಎಂದು ರೈ ಆಗ್ರಹಿಸಿದರು.
ದೆಹಲಿಯಲ್ಲಿ ದಟ್ಟ ಹೊಗೆ ಇದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ ಎಂದು ರೈ ಹೇಳಿದರು. ಮಾಲಿನ್ಯಕಾರಕ ಟ್ರಕ್‌ಗಳು, ವಾಣಿಜ್ಯ ಬಳಕೆಯ ನಾಲ್ಕು ಚಕ್ರದ ವಾಹನಗಳ ಚಾಲನೆ ಮತ್ತು ಎಲ್ಲಾ ರೀತಿಯ ನಿರ್ಮಾಣಗಳ ನಿಷೇಧ ಸೇರಿದಂತೆ ಎಲ್ಲಾ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಂದರು.

ಕೇಂದ್ರ ಪರಿಸರ ಸಚಿವರು ಎಲ್ಲಿದ್ದಾರೆ..? ಬಿಜೆಪಿ ಪಕ್ಷಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ..? ಎಂದು ರೈ ಪ್ರಶ್ನಿಸಿದ್ದಾರೆ.
ದೆಹಲಿಯ ಗಾಳಿಯ ಗುಣಮಟ್ಟವು ಶುಕ್ರವಾರ ಬೆಳಿಗ್ಗೆ “ತೀವ್ರ ಪ್ಲಸ್” ವರ್ಗಕ್ಕೆ ಕುಸಿದಿದೆ. ಈ ಹಂತದಲ್ಲಿ ಮಾಲಿನ್ಯಕಾರಕ ಟ್ರಕ್‌ಗಳು, ವಾಣಿಜ್ಯ ಬಳಕೆಯ ನಾಲ್ಕು ಚಕ್ರದ ವಾಹನಗಳು ಮತ್ತು ಎಲ್ಲಾ ರೀತಿಯ ನಿರ್ಮಾಣಗಳ ನಿಷೇಧ ಸೇರಿದಂತೆ ಎಲ್ಲಾ ತುರ್ತು ಕ್ರಮಗಳನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಜಾರಿ ಮಾಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version