ಇಂದು ಕಾಫಿನಾಡಿಗೆ ಬಸವರಾಜ್ ಬೊಮ್ಮಾಯಿ | ‘ಚಿಕ್ಕಮಗಳೂರು ಹಬ್ಬ’ಕ್ಕೆ ಚಾಲನೆ ನೀಡಲಿರುವ ಸಿಎಂ - Mahanayaka
3:10 AM Wednesday 10 - September 2025

ಇಂದು ಕಾಫಿನಾಡಿಗೆ ಬಸವರಾಜ್ ಬೊಮ್ಮಾಯಿ | ‘ಚಿಕ್ಕಮಗಳೂರು ಹಬ್ಬ’ಕ್ಕೆ ಚಾಲನೆ ನೀಡಲಿರುವ ಸಿಎಂ

chikkamagaluru
18/01/2023

ಚಿಕ್ಕಮಗಳೂರು:  ಇಂದು ಕಾಫಿನಾಡು ಚಿಕ್ಕಮಗಳೂರಿಗೆ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಲಿದ್ದು, ‘ಚಿಕ್ಕಮಗಳೂರು ಹಬ್ಬ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


Provided by

ಬೆಳಗ್ಗೆ 11 ಗಂಟೆಗೆ  ಹೆಲಿಕ್ಯಾಪ್ಟರ್ ಮೂಲಕ ಬೀರೂರಿಗೆ ಆಗಮಿಸಲಿದ್ದಾರೆ. ಬೀರೂರಿನಲ್ಲಿ ಶಾಸಕ ಬೆಳ್ಳಿ ಪ್ರಕಾಶ್ ಮಗಳ ಮದುವೆಯಲ್ಲಿ ಭಾಗಿ,  ಮಧ್ಯಾಹ್ನ ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದ್ದಾರೆ.

3:30ಕ್ಕೆ ‘ಚಿಕ್ಕಮಗಳೂರು ಹಬ್ಬ’ದ ಉತ್ಸವದ ಮೆರವಣಿಗೆ ವೀಕ್ಷಣೆ ಮಾಡಲಿದ್ದಾರೆ. ಇದೇ ವೇಳೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೃಷಿ ಮೇಳ ಸೇರಿದಂತೆ ಸೇರಿದಂತೆ ವಿವಿಧ ಮೇಳಕ್ಕೆ ಚಾಲನೆ‌‌‌ ದೊರೆಯಲಿದೆ.  ಸಂಜೆ 6ಕ್ಕೆ ಚಂದ್ರದ್ರೋಣ ವೇದಿಕೆಯಲ್ಲಿ ಚಿಕ್ಕಮಗಳೂರು ಹಬ್ಬಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ.

ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿರುವ ಚಂದ್ರದ್ರೋಣ ವೇದಿಕೆ ಸಜ್ಜುಗೊಂಡಿದೆ.  ಕಾರ್ಯಕ್ರಮದ ನಂತರ ಸಿಎಂ ಬೊಮ್ಮಾಯಿ ಮತ್ತೆ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ