ರಾಷ್ಟ್ರಪತಿ ಪದಕ ಪುರಸ್ಕೃತ ರಾಮ ಪೂಜಾರಿಯವರಿಗೆ ಬಜ್ಪೆ ಕರಾವಳಿ ಟೀಮ್ ಸನ್ಮಾನ

02/02/2024
ಬಜ್ಪೆ: ಪೊಲೀಸ್ ಇಲಾಖೆಯಲ್ಲಿ 2024 ನೇ ಸಾಲಿನ ಉತ್ತಮ ಕೆಲಸಕ್ಕಾಗಿ, ರಾಷ್ಟ್ರಪತಿಯವರಿಂದ ಶ್ಲಾಘನೀಯ ಸೇವಾ ಪದಕ ಪಡೆದುಕೊಂಡ, ಬಜ್ಪೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಮ ಪೂಜಾರಿಯವರಿಗೆ ಬಜ್ಪೆ ಕರಾವಳಿ ಟೀಮ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಟೀಮ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿರಾಜ್ ಬಜ್ಪೆ, ಉದ್ಯಮಿ ಇಫ್ತಿಕರ್ ಹಾಜಿ,ಕಿಶೋರ್ ಕುಮಾರ್, ಝುಬೈರ್ ಡಿಲಕ್ಸ್, ಹಕೀಮ್, ಅನ್ವರ್ ರಝಕ್, ಅಶ್ರಫ್ ಮತ್ತು ಠಾಣಾ ಸಿಬ್ಬಂದಿಗಳಾದ ಸುಜನ್ ಮತ್ತು ಪಾಟೀಲ್ ಉಪಸ್ಥಿತರಿದ್ದರು .