ವೈದ್ಯನ ಕೊಲೆ ಪ್ರಕರಣ: ಪೊಲೀಸರಿಂದ ತಪ್ಪಿಸಿಕೊಳ್ಳಲು 8 ಮೊಬೈಲ್, 20 ಸಿಮ್ ಬಳಸಿದ್ದ ಆರೋಪಿ! - Mahanayaka
8:45 PM Wednesday 20 - August 2025

ವೈದ್ಯನ ಕೊಲೆ ಪ್ರಕರಣ: ಪೊಲೀಸರಿಂದ ತಪ್ಪಿಸಿಕೊಳ್ಳಲು 8 ಮೊಬೈಲ್, 20 ಸಿಮ್ ಬಳಸಿದ್ದ ಆರೋಪಿ!

02/11/2024


Provided by

63 ವರ್ಷದ ವೈದ್ಯ ಯೋಗೇಶ್ ಚಂದರ್ ಪೌಲ್ ಅವರ ಹತ್ಯೆ ಮತ್ತು ದರೋಡೆ ಪ್ರಕರಣದ ಪ್ರಮುಖ ಶಂಕಿತನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗವು ಬಂಧಿಸಿದೆ. ಮೇ ತಿಂಗಳಲ್ಲಿ ತನ್ನ ಜಂಗ್ಪುರ ವಿಸ್ತರಣಾ ಮನೆಯಲ್ಲಿ ಶವವಾಗಿ ವೈದ್ಯರು ಪತ್ತೆಯಾಗಿದ್ದರು. ಆರೋಪಿಯು ಪೊಲೀಸರ ಕೈಯಿಂದ ತಪ್ಪಿಸಲು ಎಂಟು ಮೊಬೈಲ್ ಫೋನ್‌ಗಳು ಮತ್ತು 20 ಸಿಮ್ ಕಾರ್ಡ್ ಗಳನ್ನು ಬಳಸಿದ್ದ ಎಂಬ ಮಾಹಿತಿ ಸಿಕ್ಕಿದೆ.

ವಿಷ್ಣುಸ್ವರೂಪ್ ಶಾಹಿ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸ್ ತಂಡವು 1,600 ಕಿಲೋಮೀಟರ್ ಬೆನ್ನಟ್ಟಿದ ನಂತರ ನವೆಂಬರ್ 2 ರಂದು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ.

ಮೇ 10ರ ಸಂಜೆ ವೈದ್ಯ ಪಾಲ್ ಅವರನ್ನು ನಿವಾಸದಲ್ಲಿ ಕೊಲೆ ಮಾಡಲಾಗಿತ್ತು. ಅಡುಗೆಮನೆಯಲ್ಲಿ ವೈದ್ಯರ ಶವ ಇತ್ತು. ಮನೆಯನ್ನು ದರೋಡೆ ಮಾಡಲಾಗಿತ್ತು.
ಶಾಹೀ ನೇತೃತ್ವದ ಒಂದು ಗುಂಪು ಈ ಅಪರಾಧಕ್ಕೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಿಂದ ಶೀಘ್ರದಲ್ಲೇ ತಿಳಿದುಬಂದಿದೆ. ಕುಟುಂಬದ ಮನೆಕೆಲಸಗಾರ ಬಸಂತಿ ಮತ್ತು ಇಬ್ಬರು ಸಹಚರರಾದ ಆಕಾಶ್ ಕುಮಾರ್ ಮತ್ತು ಹಿಮಾಂಶು ಜೋಶಿ ಸೇರಿದಂತೆ ಮೂವರು ಶಂಕಿತರನ್ನು ಕೂಡಾ ಬಂಧಿಸಲಾಗಿತ್ತು.

ಶಕ್ತಿ ಸಾಯಿ ಮತ್ತು ಕೃಷ್ಣ ಶಾಹಿ ಸೇರಿದಂತೆ ಹಲವಾರು ಉಪನಾಮಗಳಿಂದಲೂ ಕರೆಸಿಕೊಳ್ಳುತ್ತಿದ್ದ ಮತ್ತು ಮಾಸ್ಟರ್ ಮೈಂಡ್ ಎಂದು ನಂಬಲಾಗಿದ್ದ ಶಾಹಿ, ಇತರ ನಾಲ್ವರು ಸಹಚರರೊಂದಿಗೆ ಹಲವಾರು ತಿಂಗಳುಗಳ ಕಾಲ ಪೊಲೀಸರಿಂದ ಕೈಯಿಂದ ತಪ್ಪಿಸಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ