ಅರೆಸ್ಟ್: 3 ಲಕ್ಷ ಲಂಚ ಪಡೆಯುತ್ತಿದ್ದ ಶಿಕ್ಷಣ ಅಧಿಕಾರಿಯ ಬಂಧನ - Mahanayaka

ಅರೆಸ್ಟ್: 3 ಲಕ್ಷ ಲಂಚ ಪಡೆಯುತ್ತಿದ್ದ ಶಿಕ್ಷಣ ಅಧಿಕಾರಿಯ ಬಂಧನ

19/08/2024

3 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಆಗ್ರಾ ವಿಭಾಗದ ಜಂಟಿ ಶಿಕ್ಷಣ ನಿರ್ದೇಶಕ ರಾಮ್‌ಪ್ರತಾಪ್ ಶರ್ಮಾ ಅವರನ್ನು ಉತ್ತರ ಪ್ರದೇಶ ವಿಚಕ್ಷಣಾ ಇಲಾಖೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಶಿಕ್ಷಕರೊಬ್ಬರು ನೀಡಿದ ದೂರಿನ ಮೇರೆಗೆ ಈ ಬಂಧನವನ್ನು ಮಾಡಲಾಗಿದ್ದು, ಶಿಕ್ಷಣ ಇಲಾಖೆಯಾದ್ಯಂತ ಆಘಾತವನ್ನುಂಟು ಮಾಡಿದೆ.

ಡಿಸಿ ವೇದಿಕ್ ಇಂಟರ್ ಕಾಲೇಜಿನ ಸಹಾಯಕ ಶಿಕ್ಷಕ ಮತ್ತು ಆಗ್ರಾದ ಆವಾಸ್ ವಿಕಾಸ್ ಕಾಲೋನಿಯ ಸೆಕ್ಟರ್ 3 ರ ನಿವಾಸಿ ಅಜಯ್ ಪಾಲ್ ಸಿಂಗ್ ಅವರು ದೂರು ದಾಖಲಿಸಿದ್ದಾರೆ ಎಂದು ಎಸ್ಪಿ ವಿಜಿಲೆನ್ಸ್ ಶಗುನ್ ಗೌತಮ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಸಿಂಗ್ ಅವರ ಪ್ರಕರಣದಲ್ಲಿ ಅನುಕೂಲಕರ ವರದಿಗೆ ಪ್ರತಿಯಾಗಿ ಶರ್ಮಾ 10 ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.


Provided by

ಅಧಿಕಾರಿಯನ್ನು ಬಲೆಗೆ ಬೀಳಿಸಲು ವಿಚಕ್ಷಣಾ ಇಲಾಖೆ ರಹಸ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಶರ್ಮಾ ಅವರ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿತು. ಮೊದಲ ಕಂತಾಗಿ ೩ ಲಕ್ಷ ರೂ.ಗಳನ್ನು ತಲುಪಿಸಲು ಅಜಯ್ ಪಾಲ್ ಸಿಂಗ್ ಅವರಿಗೆ ಸೂಚನೆ ನೀಡಲಾಯಿತು.
ಶನಿವಾರ, ಸಿಂಗ್ ಹಣದೊಂದಿಗೆ ನಿರ್ದೇಶಕರ ಕಚೇರಿಗೆ ಆಗಮಿಸಿದರು. ಇದೇ ವೇಳೆ ಶರ್ಮಾ ಲಂಚವನ್ನು ಸ್ವೀಕರಿಸಿ ತಮ್ಮ ಕಾರನ್ನು ಹತ್ತುತ್ತಿದ್ದಂತೆ, ವಿಚಕ್ಷಣಾ ತಂಡವು ದಾಳಿ ನಡೆಸಿ, ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಲಂಚವನ್ನು ವಶಪಡಿಸಿಕೊಂಡಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ