ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ದಾರುಣ ಸಾವು | ಅಷ್ಟಕ್ಕೂ ಶವಾಗಾರದಲ್ಲಿ ನಡೆದದ್ದೇನು ಗೊತ್ತಾ? - Mahanayaka
9:38 PM Tuesday 16 - September 2025

ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ದಾರುಣ ಸಾವು | ಅಷ್ಟಕ್ಕೂ ಶವಾಗಾರದಲ್ಲಿ ನಡೆದದ್ದೇನು ಗೊತ್ತಾ?

03/01/2021

ಗಾಜಿಯಾಬಾದ್: ಸಂಬಂಧಿಯ ಅಂತ್ಯಸಂಸ್ಕಾರಕ್ಕೆ  ಬಂದಿದ್ದ 18 ಸಂಬಂಧಿಕರು ಶವಾಗಾರದ ಮೇಲ್ಛಾವಣಿ ಕುಸಿದು ದಾರುಣವಾಗಿ ಸಾವನ್ನಪ್ಪಿದ ಘಟನೆ  ಗಾಜಿಯಾಬಾದ್​ ನ ಮುರಾದ್​ ನಗರದಲ್ಲಿ  ನಡೆದಿದ್ದು, ಈ ಸಂದರ್ಭ ಒಟ್ಟು 25 ಜನರಿದ್ದರು.  ಇನ್ನೂ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ.


Provided by

ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ನಡೆಸಲೆಂದು ಸಂಬಂಧಿಕರು ತೆರಳಿದ್ದಾರೆ.  ಅಂತ್ಯಕ್ರಿಯೆಗೂ ಮೊದಲು ಜೋರಾಗಿ ಮಳೆ ಸುರಿದಿದ್ದು, ಸಂಬಂಧಿಕರು ಛಾವಣಿಯೊಳಗೆ ಸೇರಿಕೊಂಡಿದ್ದಾರೆ. ಈ ವೇಳೆ ಏಕಾಏಕಿ ಛಾವಣಿ ಕುಸಿದಿದ್ದು, ಪರಿಣಾಮವಾಗಿ 18 ಜನರು ಸಾವನ್ನಪ್ಪಿ, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಗಾಜಿಯಾಬಾದ್​ ಪೊಲೀಸರು ಮತ್ತು ಎನ್​ಡಿಆರ್​ಎಫ್​ನ ರಕ್ಷಣಾ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ