ಆಂಧ್ರದಲ್ಲಿ ಬನ್ನಿ ಹಬ್ಬದ ಸಂದರ್ಭದಲ್ಲಿ ಹಿಂಸಾತ್ಮಕ ಘರ್ಷಣೆ: 70 ಕ್ಕೂ ಹೆಚ್ಚಿನ ಮಂದಿಗೆ ಗಾಯ - Mahanayaka
11:47 PM Tuesday 9 - September 2025

ಆಂಧ್ರದಲ್ಲಿ ಬನ್ನಿ ಹಬ್ಬದ ಸಂದರ್ಭದಲ್ಲಿ ಹಿಂಸಾತ್ಮಕ ಘರ್ಷಣೆ: 70 ಕ್ಕೂ ಹೆಚ್ಚಿನ ಮಂದಿಗೆ ಗಾಯ

13/10/2024

ಆಂಧ್ರಪ್ರದೇಶದ ಕರ್ನೂಲಿನಲ್ಲಿ ಭಾನುವಾರ ದಸರಾ ಆಚರಣೆಯ ಪ್ರಮುಖ ಆಕರ್ಷಣೆಯಾದ ವಾರ್ಷಿಕ “ಬನ್ನಿ ಉತ್ಸವ” ದಲ್ಲಿ ಹಿಂಸಾತ್ಮಕ ಘಟನೆ ‌ನಡೆದಿದೆ. ಪರಿಣಾಮ ಕನಿಷ್ಠ 70 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.


Provided by

ದಸರಾ ಹಬ್ಬದ ಭಾಗವಾಗಿ ಆಚರಿಸಲಾಗುವ ವಾರ್ಷಿಕ ಬನ್ನಿ ಉತ್ಸವವು ಮತ್ತೊಮ್ಮೆ ಅವ್ಯವಸ್ಥೆಗೆ ಕಾರಣವಾಗಿದ್ದು, ಕರ್ನೂಲಿನ ದೇವರಗಟ್ಟು ಗ್ರಾಮದಲ್ಲಿ ಕನಿಷ್ಠ 70 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಳಗುಂದ ಮಂಡಲದಲ್ಲಿ ನಡೆಯುವ ಬನ್ನಿ ಉತ್ಸವವು ಸಾಂಪ್ರದಾಯಿಕ ಕೋಲು ಹೋರಾಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿಸ್ಪರ್ಧಿ ಬಣಗಳ ಗ್ರಾಮಸ್ಥರು ಮಾಲಾ ಮಲ್ಲೇಶ್ವರ ಸ್ವಾಮಿಯ ವಿಗ್ರಹಗಳನ್ನು ಪಡೆಯಲು ಹೋರಾಡುತ್ತಾರೆ. ಹೆಚ್ಚಿನ ಭದ್ರತಾ ಕ್ರಮಗಳು ಮತ್ತು ಪೊಲೀಸರು ವಿಧಿಸಿದ ನಿರ್ಬಂಧಗಳ ಹೊರತಾಗಿಯೂ, ಭಾನುವಾರ ಮುಂಜಾನೆ ಭಾಗವಹಿಸುವವರು ಘರ್ಷಣೆ ನಡೆಸಿದ್ದರಿಂದ ಮಧ್ಯರಾತ್ರಿಯ ಆಚರಣೆಗಳು ಹಿಂಸಾತ್ಮಕವಾಗಿ ಮಾರ್ಪಟ್ಟವು.

ಸ್ಥಳೀಯ ಪೊಲೀಸರು ಸಂಭಾವ್ಯ ಅಶಾಂತಿ‌ ನಡೆಯುವ ಸಾಧ್ಯತೆ ಇರೋದ್ರಿಂದ ಘರ್ಷಣೆಗಳನ್ನು ತಡೆಯಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಆದರೂ ಸಾಂಪ್ರದಾಯಿಕ ಹೋರಾಟದ ತೀವ್ರತೆಯು ಭದ್ರತಾ ಪ್ರಯತ್ನಗಳನ್ನು ಮೀರಿಸಿತು.

ಗಾಯಾಳುಗಳಲ್ಲಿ ಅನೇಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಬನ್ನಿ ಉತ್ಸವವನ್ನು ಸ್ಥಳೀಯ ಸಂಪ್ರದಾಯದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದ್ದರೂ, ಅದರ ಹಿಂಸಾತ್ಮಕ ಸ್ವರೂಪವು ಕಳವಳವನ್ನು ಹುಟ್ಟುಹಾಕಿದೆ. ಈ ಕುರಿತು ನಿವಾಸಿಗಳು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇನ್ನು ಕೆಲವರು ಈ ಘಟನೆಯ ಸಾಂಸ್ಕೃತಿಕ ಮಹತ್ವವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ