ಬೆಳ್ತಂಗಡಿ: ಸುಮಂತ್ ಕೊಲೆ ಪ್ರಕರಣ; ಕೆರೆಯಲ್ಲಿ ಕತ್ತಿ ಮತ್ತು ಟಾರ್ಚ್ ಪತ್ತೆ
ಬೆಳ್ತಂಗಡಿ: ತಾಲೂಕಿನ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15) ಎಂಬ ಬಾಲಕನ ನಿಗೂಢ ಸಾವಿನ ಪ್ರಕರಣ ಸಂಬಂಧ , ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರಿಗೆ ಮಹತ್ವದ ಸುಳಿವುಗಳು ಲಭ್ಯವಾಗಿವೆ. ಮೃತದೇಹ ಪತ್ತೆಯಾಗಿದ್ದ ಕೆರೆಯ ನೀರನ್ನು ಬತ್ತಿಸಿ ಶೋಧ ನಡೆಸಿದಾಗ, ಬಾಲಕನಿಗೆ ಸೇರಿದ ಟಾರ್ಚ್ ಮತ್ತು ಒಂದು ಹಳೆಯ ಕತ್ತಿ ಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆ: ಬುಧವಾರ ಬೆಳಗ್ಗೆ ಸುಮಂತ್ ಮನೆಯಿಂದ ದೇವಸ್ಥಾನಕ್ಕೆಂದು ಹೊರಟಿದ್ದನು. ಆದರೆ ಆತ ಮನೆಗೆ ಹಿಂತಿರುಗದಿದ್ದಾಗ ಹುಡುಕಾಟ ನಡೆಸಲಾಗಿತ್ತು. ಸಂಜೆಯ ವೇಳೆಗೆ ಸಮೀಪದ ಕೆರೆಯೊಂದರಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು.
ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಶಂಕಿಸಲಾಗಿತ್ತಾದರೂ, ಮೃತದೇಹದ ತಲೆಯ ಭಾಗದಲ್ಲಿ ಮೂರು ಗಂಭೀರ ಗಾಯಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಕೊಲೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದರು.
ಶೋಧ ಕಾರ್ಯದಲ್ಲಿ ಪತ್ತೆಯಾದ ವಸ್ತುಗಳು: ಗುರುವಾರ ಪೊಲೀಸರು ಮತ್ತು ಸೋಕೋ (SOCO) ತಂಡವು ತನಿಖೆಯ ಭಾಗವಾಗಿ ಮೃತದೇಹ ಸಿಕ್ಕಿದ್ದ ಕೆರೆಯ ನೀರನ್ನು ಪಂಪ್ ಸೆಟ್ ಬಳಸಿ ಸಂಪೂರ್ಣವಾಗಿ ಖಾಲಿ ಮಾಡಿದರು. ಈ ವೇಳೆ ಕೆರೆಯ ತಳಭಾಗದಲ್ಲಿ ಸುಮಂತ್ ಮನೆಯಿಂದ ಹೊರಡುವಾಗ ಹಿಡಿದುಕೊಂಡು ಹೋಗಿದ್ದ ನೀಲಿ ಬಣ್ಣದ ಟಾರ್ಚ್ ಪತ್ತೆಯಾಗಿದೆ.
ಇದರ ಜೊತೆಗೆ ಒಂದು ತುಕ್ಕು ಹಿಡಿದ ಹಳೆಯ ಕತ್ತಿಯೂ ಸಿಕ್ಕಿದ್ದು, ಇದನ್ನು ಕೊಲೆಗೆ ಬಳಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























