ಹೃದಯ ವಿದ್ರಾವಕ ಘಟನೆ : ರಸ್ತೆದಾಡುತ್ತಿದ್ದ ಅಂಧ ದಂಪತಿ ಅಪಘಾತಕ್ಕೆ ಬಲಿ! - Mahanayaka

ಹೃದಯ ವಿದ್ರಾವಕ ಘಟನೆ : ರಸ್ತೆದಾಡುತ್ತಿದ್ದ ಅಂಧ ದಂಪತಿ ಅಪಘಾತಕ್ಕೆ ಬಲಿ!

nelamangala
23/02/2024


Provided by

ನೆಲಮಂಗಲ: ರಸ್ತೆದಾಟುತ್ತಿದ್ದ ಅಂಧ ದಂಪತಿ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ನಡೆದಿದೆ.

ಶ್ರೀಧರ್ (52), ಅರ್ಚನಾ(35) ಮೃತ ಅಂಧ ದಂಪತಿಯಾಗಿದ್ದಾರೆ. ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ದಾಟುತ್ತಿದ್ದ ಅಂಧ ದಂಪತಿಗೆ ಬೈಕ್ ವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ