ಚಾರ್ಮಾಡಿ ಘಾಟ್ ಧರೆ ಕುಸಿತ, ಸಂಚಾರಕ್ಕೆ ಅಡಚಣೆ, ರಸ್ತೆಯಿಂದ ಮಣ್ಣು ತೆರವು - Mahanayaka

ಚಾರ್ಮಾಡಿ ಘಾಟ್ ಧರೆ ಕುಸಿತ, ಸಂಚಾರಕ್ಕೆ ಅಡಚಣೆ, ರಸ್ತೆಯಿಂದ ಮಣ್ಣು ತೆರವು

charmadi
09/10/2024

ಕೊಟ್ಟಿಗೆಹಾರ:  ಮಳೆಯಿಂದ ಚಾರ್ಮಾಡಿ ಘಾಟಿಯ ಹಲವೆಡೆ  ಧರೆ ಕುಸಿತವಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು.

ಬುಧವಾರ ಸಂಜೆ ಸುರಿದ ಅತಿಯಾದ ಮಳೆಗೆ ಚಾರ್ಮಾಡಿ ಘಾಟಿಯ ಹಲವೆಡೆ ಧರೆ ಕುಸಿತವಾಗಿರುವುದರಿಂದ ಮಣ್ಣು ರಸ್ತೆಗೆ ಬಿದ್ದಿದ್ದು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆಯಾಗಿತ್ತು.


Provided by

ವಾಹನಗಳು ಚಾರ್ಮಾಡಿ ಘಟ್ಟದಲ್ಲಿ ಸಾಲುಗಟ್ಟಿ ನಿಂತಿದ್ದವುಮಳೆಯ ರಭಸಕ್ಕೆ ನೀರು ಕೂಡ ಧಾರಾಕಾರವಾಗಿ  ರಸ್ತೆಯಲ್ಲಿಯೇ ಹರಿಯಿತು.

ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರ ಮುಕ್ತ ಮಾಡಿದ್ದಾರೆ. ಚಾರ್ಮಾಡಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ