ಸುಹಾಸ್ ಕೊಲೆ ಆರೋಪಿಗಳೆಂದು ಬಿಂಬಿಸಿ ಮಾನಹಾನಿ: ಟಿವಿ ಚಾನೆಲ್ ವಿರುದ್ಧ ದೂರು ದಾಖಲು - Mahanayaka
5:19 AM Wednesday 17 - September 2025

ಸುಹಾಸ್ ಕೊಲೆ ಆರೋಪಿಗಳೆಂದು ಬಿಂಬಿಸಿ ಮಾನಹಾನಿ: ಟಿವಿ ಚಾನೆಲ್ ವಿರುದ್ಧ ದೂರು ದಾಖಲು

uttar pradesh police
04/05/2025

ಮಂಗಳೂರು:   ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳೆಂದು ಬಿಂಬಿಸಿ ಬೇರೆ ಪ್ರಕರಣವೊಂದಕ್ಕೆ ಸಂಬಂಧಿಸಿದವರ ಫೋಟೋವನ್ನು ಪ್ರಸಾರ ಮಾಡಿರುವ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.


Provided by

ವ್ಯಕ್ತಿಯೊಬ್ಬರು R ಟಿವಿ ಎಂಬ ಚಾನೆಲ್ ವಿರುದ್ಧ ನೀಡಿರುವ ದೂರಿನಲ್ಲಿ 2021ರಲ್ಲಿ ನಡೆದ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ತನ್ನನ್ನೂ ಒಳಗೊಂಡಂತೆ ಗೆಳೆಯರ ಗ್ರೂಪ್ ಫೋಟೋವನ್ನು R ಟಿವಿ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದ್ದು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳೆಂದು ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ತಸ್ಲಿಂ ಎಂಬವರು ಪೊಲೀಸರಿಗೆ ದೂರು ನೀಡಿದವರಾಗಿದ್ದು, ಚಾನೆಲ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ