ದೆಹಲಿಯಲ್ಲಿ ನೀರಿನ ಸಮಸ್ಯೆ: ಡಿಜೆಬಿ ಕಚೇರಿ ಧ್ವಂಸ, ನೀರಿಗಾಗಿ ಸರತಿ ಸಾಲಿನಲ್ಲಿ ನಿಂತ ಜನರು - Mahanayaka

ದೆಹಲಿಯಲ್ಲಿ ನೀರಿನ ಸಮಸ್ಯೆ: ಡಿಜೆಬಿ ಕಚೇರಿ ಧ್ವಂಸ, ನೀರಿಗಾಗಿ ಸರತಿ ಸಾಲಿನಲ್ಲಿ ನಿಂತ ಜನರು

17/06/2024


Provided by

ಬಿಸಿಲಿನ ತಾಪದಿಂದ ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿದೆ. ದಕ್ಷಿಣ ದೆಹಲಿ ರೈಸಿಂಗ್ ಮೇನ್ಸ್ ನಲ್ಲಿ ಪ್ರಮುಖವಾಗಿ ನೀರಿನ ಸೋರಿಕೆಯನ್ನು ವರದಿ ಮಾಡುವ ನಗರದ ಪ್ರಮುಖ ನೀರಿನ ಪೈಪ್ ಲೈನ್‌ಗಳಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಜಲ ಸಚಿವ ಅತಿಶಿ ಪೊಲೀಸರನ್ನು ಒತ್ತಾಯಿಸಿದ್ದಾರೆ. ಭಾನುವಾರ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಬರೆದ ಪತ್ರದಲ್ಲಿ, ಅತಿಶಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಯಮುನಾದಿಂದ ಪೂರೈಕೆ ಕಡಿಮೆಯಾದ ಕಾರಣ ನೀರಿನ ಉತ್ಪಾದನೆಯಲ್ಲಿ ಗಮನಾರ್ಹ ಕುಸಿತವಾಗಿದೆ. ಇದು ವ್ಯಾಪಕ ಕೊರತೆಗೆ ಕಾರಣವಾಗಿದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಜಲ ಸಚಿವರು, ಹರಿಯಾಣ ಸರ್ಕಾರವು ಉದ್ದೇಶಪೂರ್ವಕವಾಗಿ ದೆಹಲಿಗೆ ನೀರು ಸರಬರಾಜನ್ನು ಕಡಿಮೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ತೀವ್ರ ಶಾಖದ ಮಧ್ಯೆ ಬಿಜೆಪಿ ಪಕ್ಷವು ಉದ್ದೇಶಪೂರ್ವಕವಾಗಿ ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. “ನೀವು ವಾಜಿರಾಬಾದ್ ಬ್ಯಾರೇಜ್ ಗೆ ಹೋಗಿ. ಅಲ್ಲಿ ಒಂದು ಹನಿ ನೀರೂ ಇಲ್ಲ.

ನೀವು ಮುನಾಕ್ ಕಾಲುವೆಗೆ ಹೋಗಿ. 1,050 ಕ್ಯೂಸೆಕ್ ಬದಲು ಕೇವಲ 900 ಕ್ಯೂಸೆಕ್ ನೀರು ಬರುತ್ತಿದೆ” ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಬಿಜೆಪಿಯವರು ದೆಹಲಿಗೆ ನೀರು ಒದಗಿಸದಿದ್ದರೆ, ಸಂಸ್ಕರಣಾ ಘಟಕಕ್ಕೆ ನೀರು ತಲುಪದಿದ್ದರೆ, ದೆಹಲಿಯ ಜನರಿಗೆ ಹೇಗೆ ಸರಬರಾಜು ಮಾಡುವುದು?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಈಶಾನ್ಯ ದೆಹಲಿಯ ಪ್ರದೇಶದಲ್ಲಿ ಜಲ ಮಂಡಳಿಯ ಪೈಪ್‌ಲೈನ್ ಗಳಲ್ಲಿ ನೀರು ಸೋರಿಕೆಯಾಗಿರುವುದನ್ನು ದೆಹಲಿ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ