ಸಂಸತ್ ಕಲಾಪಗಳಿಗೆ ಅಡ್ಡಿ: 15 ಸಂಸದರ ಅಮಾನತು

14/12/2023
ನವದೆಹಲಿ: ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯಿಂದ ಒಟ್ಟು 15 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳುವವರೆಗೂ 15 ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯ 14 ಸಂಸದರು ರಾಜ್ಯಸಭೆಯ ಓರ್ವ ಸಂಸದನನ್ನು ಅಮಾನತುಗೊಳಿಸಲಾಗಿದೆ.
ಕನಿಮೋಳಿ, ಮಾಣಿಕಂ ಟ್ಯಾಗೋರ್, ಪಿಆರ್ ನಟರಾಜನ್, ವಿಕೆ ಶ್ರೀಕಂಠಂ, ಬೇನಿ ಬಹನ್, ಕೆ ಸುಬ್ರಮಣ್ಯಂ, ಎಸ್ಆರ್ ಪ್ರತಿಬನ್, ಎಸ್ ವೆಂಕಟೇಶನ್, ಮೊಹಮ್ಮದ್ ಜಾವೇದ್, ಟಿಎನ್ ಪ್ರತಾಪನ್, ಹೈಬಿ ಈಡನ್, ಎಸ್ ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅಮಾನತುಗೊಂಡ ಸಂಸದರಾಗಿದ್ದಾರೆ.