ಚಿಕ್ಕಮಗಳೂರು: ಎಮ್ಮೆ ಮೇಯಿಸಲು ಹೋಗಿದ್ದ  ರೈತ ಹಳ್ಳಕ್ಕೆ ಬಿದ್ದು ಸಾವು - Mahanayaka
7:46 PM Wednesday 22 - October 2025

ಚಿಕ್ಕಮಗಳೂರು: ಎಮ್ಮೆ ಮೇಯಿಸಲು ಹೋಗಿದ್ದ  ರೈತ ಹಳ್ಳಕ್ಕೆ ಬಿದ್ದು ಸಾವು

chikkamagaluru
22/10/2025

ಚಿಕ್ಕಮಗಳೂರು:   ಕಾಫಿನಾಡ ಮಲೆನಾಡು—ಬಯಲುಸೀಮೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. 2025ರ ವರ್ಷಪೂರ್ತಿ ಮಳೆಗೆ  ಕಾಫಿನಾಡಲ್ಲಿ ಐದನೇ ಬಲಿಯಾಗಿದೆ.

ಎಮ್ಮೆ ಮೇಯಿಸಲು ಹೋಗಿದ್ದ ರೈತ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಲಕ್ಷ್ಮಣ್ ಗೌಡ (45) ಮೃತ ದುರ್ದೈವಿಯಾಗಿದ್ದಾರೆ.  ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಲಕ್ಷ್ಮಣ ಗೌಡ,  ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರೋ ಶಂಕೆ‌ ವ್ಯಕ್ತವಾಗಿದೆ. ನಿರಂತರ ಮಳೆಯಿಂದ ಅಪಾಯದ ಮಟ್ಟದಲ್ಲಿ ಹಳ್ಳ—ಕೊಳ್ಳಗಳು ಹರಿಯುತ್ತಿವೆ.  ನೀರು ಕಡಿಮೆಯಾದ ಬಳಿಕ ಮೃತದೇಹ‌ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಲಕ್ಷ್ಮಣ್ ಗೌಡನಿಗಾಗಿ ಪೋಷಕರಿಂದ  ಹುಡುಕಾಟ ನಡೆಸಿದ್ದರು. ಆದ್ರೆ ಲಕ್ಷ್ಮಣ್ ಗೌಡ ಅವರ ಮೃತದೇಹ ಪತ್ತೆಯಾಗಿದೆ.  ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ