ಗಣೇಶೋತ್ಸವ ಮೆರವಣಿಗೆಯಲ್ಲಿ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ  ಧಮ್ಕಿ ಹಾಕಿದ ಯುವಕ! - Mahanayaka

ಗಣೇಶೋತ್ಸವ ಮೆರವಣಿಗೆಯಲ್ಲಿ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ  ಧಮ್ಕಿ ಹಾಕಿದ ಯುವಕ!

ganeshothsava
09/09/2022

ಬೆಂಗಳೂರು: ಗಣೇಶೋತ್ಸವದ ಮೆರವಣಿಗೆಯಲ್ಲಿ ಯುವಕನೋರ್ವ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ ಧಮ್ಕಿ ಹಾಕಿರುವ ಘಟನೆ  ಯಶವಂತಪುರ ಬಳಿಯ ದೇವರಾಯಪಾಳ್ಯದಲ್ಲಿ ನಡೆದಿದೆ.

ದೇವರಾಯಪಾಳ್ಯದಲ್ಲಿ ನಿನ್ನೆ ರಾತ್ರಿ ವೇಳೆ ಗಣೇಶೋತ್ಸವ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಚಾಕು ಹಿಡಿದುಕೊಂಡು ಬಂದ ಯುವಕ ವಿಚಿತ್ರವಾಗಿ ವರ್ತಿಸಿದ್ದು, ಚಾಕು ಹಿಡಿದು ಗಣೇಶನ ಮೂರ್ತಿಗೆ ಧಮ್ಕಿ ಹಾಕಿದ್ದಾನೆ.

ಇದೇ ವೇಳೆ ಯುವಕ 20ಕ್ಕೂ ಹೆಚ್ಚಿನ ಕಾರಿನ ಗಾಜುಗಳನ್ನು ಒಡೆದು ದುರ್ವರ್ತನೆ ತೋರಿದ್ದು,  ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.


Provided by

ಈ ವೇಳೆ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಪೊಲೀಸರು ಯುವಕನನ್ನು ಬಂಧಿಸಿ, ಮುಂದಿನ ಕ್ರಮ ಜರಗಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ