‘ರಸ್ತೆ ಸರಿಪಡಿಸಿ’ ಪ್ರಧಾನಿ ಮೋದಿಗೆ ಪತ್ರ ಬರೆದ ಬಾಲಕಿ - Mahanayaka
8:33 AM Thursday 23 - October 2025

‘ರಸ್ತೆ ಸರಿಪಡಿಸಿ’ ಪ್ರಧಾನಿ ಮೋದಿಗೆ ಪತ್ರ ಬರೆದ ಬಾಲಕಿ

chikkamagaluru
17/07/2025

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಮಲಗಾರು ಗ್ರಾಮದ 8ನೇ ತರಗತಿಯ ಸಿಂಧೂರ ಮೋದಿ ಅವರಿಗೆ ಪತ್ರ ಬರೆಯಲು ಹೆಣೆದ ಕಾರಣ – ನಮ್ಮೂರ ರಸ್ತೆ!

ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದು ಗುರಿ ಸಾಧನೆಯಂತೆ ಆಗುತ್ತಿದೆ. ಮನೆಯಿಂದ ಶಾಲೆಗೆ ದಿನವೂ 3-4 ಕಿ.ಮೀ. ನಡೆಯುವ ಸಿಂಧೂರ ಹೆಸರಿನ ಬಾಲಕಿ, ಗ್ರಾಮೀಣ ರಸ್ತೆಯ ದುಸ್ಥಿತಿಯಿಂದ ಬೇಸತ್ತಿದ್ದಾಳೆ. ತನ್ನ ಊರಿನ ಮುಖ್ಯ ರಸ್ತೆಯು ತುಂಬಾ ಹಾಳಾಗಿದ್ದು, ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಆರೋಪಿಸಿರುವ ಸಿಂಧೂರ, ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸಿಂಧೂರ ತನ್ನ ಪತ್ರದಲ್ಲಿ ಹೇಳಿರುವಂತೆ:

“ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ. ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ವಾರದಲ್ಲಿ 3-4 ದಿನ ಶಾಲೆಗೆ ಹೋಗಲು ಸಾಧ್ಯವಿಲ್ಲ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ.”

ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪತ್ರ ಬರೆದಿರುವ ಈ ಬಾಲಕಿಯ ಹೃದಯಸ್ಪರ್ಶಿ ಮನವಿ ಇದೀಗ ಗ್ರಾಮದಲ್ಲಿಯೇ ಅಲ್ಲ, ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.

ಪ್ರಮುಖ ವಿಷಯವೆಂದರೆ, ಈ ಭಾಗದ ರಸ್ತೆ ಮಾತ್ರ ಶಾಲೆಗಷ್ಟೇ ಅಲ್ಲದೆ, ದಿನನಿತ್ಯದ ಆರೋಗ್ಯ ಸೇವೆ, ಅಗತ್ಯ ವಸ್ತುಗಳ ಸಾಗಣೆ, ಹಾಗೂ ಎಮರ್ಜೆನ್ಸಿ ಸಂದರ್ಭಗಳಿಗೂ ಪ್ರಮುಖ ದಾರಿ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸ್ಪಂದಿಸುವ ಸಮಯ ಇದಾಗಿದೆ ಎಂಬ ಅಭಿಪ್ರಾಯ ಈಗ ಸಾರ್ವಜನಿಕದಲ್ಲಿ ಮೂಡುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ