ಬಸ್ ನಲ್ಲಿ ಸಿಕ್ಕ ಬಂಗಾರವನ್ನು ಪೊಲೀಸರಿಗೆ ಒಪ್ಪಿಸಿದ ಬಂಗಾರದ ಮನುಷ್ಯ - Mahanayaka

ಬಸ್ ನಲ್ಲಿ ಸಿಕ್ಕ ಬಂಗಾರವನ್ನು ಪೊಲೀಸರಿಗೆ ಒಪ್ಪಿಸಿದ ಬಂಗಾರದ ಮನುಷ್ಯ

gold
18/11/2023


Provided by

ಚಾಮರಾಜನಗರ: ಬಸ್ ನಲ್ಲಿ ಸಿಕ್ಕಿದ ಚಿನ್ನದ ಸರವನ್ನು ಕಂಡಕ್ಟರ್ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕಂಡಕ್ಟರ್ ದೇವರಾಜು.ಎನ್ ನಿಷ್ಠೆ ಮೆರೆದ ಕಂಡಕ್ಟರ್. ಕಳೆದ ನ.5 ರಂದು ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುವಾಗ ಬಸ್ಸಿನಲ್ಲಿ ಕಂಡಕ್ಟರ್ ಗೆ 23 ಗ್ರಾಂ ನ ಚಿನ್ನದ ಸರ ಸಿಕ್ಕಿದೆ. ಅದನ್ನು ಡಿಪೋ ವಶಕ್ಕೆ ನೀಡಿದ್ದರು. ಆದರೆ, ವಾರಸುದಾರರು ಯಾರು ಬಾರದ ಕಾರಣ ಇಂದು ಸಾರಿಗೆ ಬಸ್ ಸಿಬ್ಬಂದಿ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರಿಗೆ ಕೊಟ್ಟಿದ್ದಾರೆ.

ಬಸ್ಸಿನಲ್ಲಿ ಸಿಕ್ಕಿರುವ 23 ಗ್ರಾಂ ಚಿನ್ನದ ಸರವು ಅಂದಾಜು 1 ಲಕ್ಷ ಮೌಲ್ಯದ್ದಾಗಿದೆ. ಶಕ್ತಿ ಯೋಜನೆ ಪರಿಣಾಮ ಮಹಿಳೆಯರು ಬಸ್ ನಲ್ಲಿ ಕಿಕ್ಕಿರಿದಿರುವುದರಿಂದ ಯಾರೋ ಮಹಿಳೆ ಬೀಳಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ