ಸರಣಿ ಅಪಘಾತ ಕೇಸ್: 'ನಾನು ಕುಡಿದೇ ಇರಲಿಲ್ಲ' ಎಂದ ಆರೋಪಿ ಚಾಲಕ - Mahanayaka

ಸರಣಿ ಅಪಘಾತ ಕೇಸ್: ‘ನಾನು ಕುಡಿದೇ ಇರಲಿಲ್ಲ’ ಎಂದ ಆರೋಪಿ ಚಾಲಕ

15/03/2025


Provided by

ಗುಜರಾತ್ ನ ವಡೋದರಾದಲ್ಲಿ ತನ್ನ ಕಾರನ್ನು ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬಳನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ 22 ವರ್ಷದ ವ್ಯಕ್ತಿ, ತಾನು ಕುಡಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಆರೋಪಿ ಶನಿವಾರ ಎಎನ್ಐಗೆ ತನ್ನ ಕಾರು ದ್ವಿಚಕ್ರ ವಾಹನಕ್ಕಿಂತ ಮುಂದಿತ್ತು ಮತ್ತು ಬಲಕ್ಕೆ ತಿರುಗುತ್ತಿದ್ದಾಗ ಗುಂಡಿ ಸಿಕ್ತು. ಹೀಗಾಗಿ ತನ್ನ ಕಾರು ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾಯಿತು ಎಂದು ಹೇಳಿಕೆ ನೀಡಿದ್ದಾನೆ.

ನಾವು ಸ್ಕೂಟಿಯ ಮುಂದೆ ಹೋಗುತ್ತಿದ್ದೆವು. ನಾವು ಬಲಕ್ಕೆ ತಿರುಗುತ್ತಿದ್ದೆವು ಮತ್ತು ರಸ್ತೆಯಲ್ಲಿ ಗುಂಡಿ ಇತ್ತು. ನಾವು ಬಲಕ್ಕೆ ತಿರುಗುವಾಗ ಸ್ಕೂಟಿ ಮತ್ತು ಕಾರು ಇತ್ತು. ಕಾರು ಮತ್ತೊಂದು ವಾಹನವನ್ನು ಸ್ವಲ್ಪ ಸ್ಪರ್ಶಿಸಿತು ಮತ್ತು ಏರ್ ಬ್ಯಾಗ್ ಇದ್ದಕ್ಕಿದ್ದಂತೆ ತೆರೆಯಿತು. ನಮ್ಮ ದೃಷ್ಟಿಗೆ ಅಡ್ಡಿಯಾಯಿತು ಮತ್ತು ಕಾರು ನಿಯಂತ್ರಣ ತಪ್ಪಿತು ಎಂದು ಆರೋಪಿ ರಕ್ಷಿತ್ ರವೀಶ್ ಚೌರಾಸಿಯಾ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ