ಕೇಸರಿ ಕೋಟೆಯಾದ ಗುಂಡ್ಲುಪೇಟೆ: ಖಾಕಿ ಹೈ ಅಲರ್ಟ್, ಷಾ ಬೆಂಗಾವಲು ಪಡೆಯಿಂದ ಟ್ರಯಲ್ - Mahanayaka

ಕೇಸರಿ ಕೋಟೆಯಾದ ಗುಂಡ್ಲುಪೇಟೆ: ಖಾಕಿ ಹೈ ಅಲರ್ಟ್, ಷಾ ಬೆಂಗಾವಲು ಪಡೆಯಿಂದ ಟ್ರಯಲ್

chamaraj nagara
24/04/2023


Provided by

ಚಾಮರಾಜನಗರ: ಚುನಾವಣಾ ಚಾಣಕ್ಯ ಅಮಿತ್ ಷಾ ರೋಡ್ ಶೋಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣ ಕೇಸರಿ ಕೋಟೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಲಾಗಿದ್ದು ಬಿಜೆಪಿ ಧ್ವಜಗಳು ರಾರಾಜಿಸುತ್ತಿದೆ.

11.40 ರ ಸುಮಾರಿಗೆ ಅಮಿತ್ ಷಾ ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿಳಿಯಲ್ಲಿದ್ದು ಅಲ್ಲಿಂದ ಬಿಜೆಪಿ ಪ್ರಚಾರ ವಾಹನದ ಮೂಲಕ ರೋಡ್ ಶೋ ನಡೆಸಲಿದ್ದಾರೆ. ಇನ್ನು, ರಾಷ್ಟ್ರೀಯ ಹೆದ್ದಾರಿ ಮೂಲಕ ಗುಂಡ್ಲುಪೇಟೆ ಹಳೇ ಬಸ್ ನಿಲ್ದಾಣ ತಲುಪುವ ಷಾ ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈಗಾಗಲೇ, ಅಮಿತ್ ಷಾ ಏರುವ ಪ್ರಚಾರ ವಾಹನ, ಹೆಲಿಪ್ಯಾಡ್ ಗಳನ್ನು ಸಿಆರ್ ಪಿಎಫ್ ಭದ್ರತಾ ಪಡೆ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಹದ್ದಿನಕಣ್ಣು ಇಟ್ಟಿದ್ದಾರೆ. ಕೆಲವೇ ಕ್ಷಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಮಿತ್ ಷಾ ಬೆಂಗಾವಲು ಪಡೆ ಪ್ರಚಾರ ವಾಹನದಲ್ಲಿ ಟ್ರಯಲ್ ನಡೆಸಿ, ಯಾವುದೇ ಅಹಿತಕರ ಘಟನೆಯಾಗದಂತೆ ಕಣ್ಣಿಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ