ಫಾಝಿಲ್ ಹತ್ಯೆ ಪ್ರಕರಣ: ಕೊಲೆಗಡುಕರನ್ನು ಕರೆತಂದಿದ್ದ ಕಾರು ಚಾಲಕನ ಬಂಧನ - Mahanayaka
8:15 AM Wednesday 20 - August 2025

ಫಾಝಿಲ್ ಹತ್ಯೆ ಪ್ರಕರಣ: ಕೊಲೆಗಡುಕರನ್ನು ಕರೆತಂದಿದ್ದ ಕಾರು ಚಾಲಕನ ಬಂಧನ

surathkal
31/07/2022


Provided by

ಮಂಗಳೂರು: ಸುರತ್ಕಲ್ ​ನಲ್ಲಿ ನಡೆದಿದ್ದ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಆರೋಪಿಗಳನ್ನು ಕರೆತಂದಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಜಿತ್ ಎಂಬಾತ ಪೊಲೀಸರ ವಶದಲ್ಲಿರುವ ಕಾರು ಚಾಲಕ. ಜುಲೈ 28ರ ರಾತ್ರಿ ಬಟ್ಟೆ ಅಂಗಡಿ ಮುಂದೆ ಫಾಝಿಲ್​ ನ ಭೀಕರ ಹತ್ಯೆ ನಡೆದಿತ್ತು. ಕೊಲೆ ಆರೋಪಿಗಳನ್ನ ಅಜಿತ್ ಕಾರಿನಲ್ಲಿ ಕರೆತಂದು ಹತ್ಯೆ ನಡೆದ ಬಳಿಕ ಕರೆದೊಯ್ದಿದ್ದ ಎನ್ನಲಾಗಿದೆ. ಸದ್ಯ ಮಂಗಳೂರು ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ಮೊದಲು ಸ್ಪಾಟ್​ಗೆ ಬಂದಿದ್ದ ಕಾರನ್ನು ಗುರುತಿಸಿದ್ದಾರೆ. ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಮಾಹಿತಿ ಪಡೆದಿದ್ದ ಖಾಕಿ, ಅದರಲ್ಲಿ ಬಿಳಿ ಬಣ್ಣದ ಕಾರುಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಅಜಿತ್ ಹೇಳಿಕೆ ಆಧರಿಸಿ ಉಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ