ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: 48 ಗಂಟೆಗಳ ವಿಚಾರಣೆಯಲ್ಲಿ ಮಾಜಿ ಪ್ರಾಂಶುಪಾಲರಿಗೆ 17 ಪ್ರಶ್ನೆಗಳನ್ನು ಕೇಳಿದ ಸಿಬಿಐ - Mahanayaka

ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: 48 ಗಂಟೆಗಳ ವಿಚಾರಣೆಯಲ್ಲಿ ಮಾಜಿ ಪ್ರಾಂಶುಪಾಲರಿಗೆ 17 ಪ್ರಶ್ನೆಗಳನ್ನು ಕೇಳಿದ ಸಿಬಿಐ

18/08/2024

ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ತೀವ್ರಗೊಳಿಸಿದೆ. ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸತತ ಎರಡನೇ ದಿನವೂ ವಿಚಾರಣೆ ನಡೆಸಿದೆ. ಶುಕ್ರವಾರ ಆರಂಭವಾದ ವಿಚಾರಣೆ ಶನಿವಾರ ಮಧ್ಯರಾತ್ರಿ 1.40ರವರೆಗೆ ನಡೆಯಿತು.

ಸುದೀರ್ಘ ವಿಚಾರಣೆ ವೇಳೆ ಘೋಷ್ ಸ್ಪಲ್ಪ ವಿರಾಮಗಳನ್ನು ತೆಗೆದುಕೊಂಡರು. ಮೂಲಗಳ ಪ್ರಕಾರ, ಸಿಬಿಐಯು ಮಾಜಿ ಪ್ರಾಂಶುಪಾಲರು ಮತ್ತು ಆಸ್ಪತ್ರೆಯ ವೈದ್ಯರಿಗೆ ಅವರ ಪ್ರಾಥಮಿಕ ತನಿಖೆ ಮತ್ತು ಕೇಸ್ ಡೈರಿಯಲ್ಲಿ ದಾಖಲಾದ ಹೇಳಿಕೆಗಳ ಆಧಾರದ ಮೇಲೆ ಸರಣಿ ಪ್ರಶ್ನೆಗಳನ್ನು ರೂಪಿಸಿದೆ.

ಆರ್ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಅವರ ಮಾನಸಿಕ ವಿಶ್ಲೇಷಣೆ ಮತ್ತು ಲೇಯರ್ಡ್ ವಾಯ್ಸ್ ವಿಶ್ಲೇಷಣೆ ನಡೆಸಲು ದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್ಎಲ್) ಮನಶ್ಶಾಸ್ತ್ರಜ್ಞರ ತಂಡವನ್ನು ಕೋಲ್ಕತ್ತಾಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Provided by

ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ, ಕೋಲ್ಕತಾ ಪೊಲೀಸರು ಆಗಸ್ಟ್ 18 ರ ಭಾನುವಾರದಿಂದ ಏಳು ದಿನಗಳವರೆಗೆ ವೈದ್ಯಕೀಯ ಕಾಲೇಜಿನ ಸುತ್ತಲೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 163 ಅನ್ನು ಜಾರಿಗೆ ತಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ