ಒಂದೇ ಚಾರ್ಜ್ ನಲ್ಲಿ 400 ಕಿ.ಮೀ. ಚಲಿಸುವ ಹೊಸ Nexon EV ಏಪ್ರಿಲ್ ನಲ್ಲಿ ಬಿಡುಗಡೆ - Mahanayaka
11:35 PM Tuesday 16 - December 2025

ಒಂದೇ ಚಾರ್ಜ್ ನಲ್ಲಿ 400 ಕಿ.ಮೀ. ಚಲಿಸುವ ಹೊಸ Nexon EV ಏಪ್ರಿಲ್ ನಲ್ಲಿ ಬಿಡುಗಡೆ

nexon ev
09/04/2022

ಭಾರತದಲ್ಲಿನ ಬಹುಪಾಲು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಟಾಟಾ ಮೋಟಾರ್ಸ್ ನಿಯಂತ್ರಿಸುತ್ತದೆ.  ಅದರಲ್ಲಿ   ಕಾಂಪ್ಯಾಕ್ಟ್ SUV ನ  ನೆಕ್ಸಾನ್ ಹೆಚ್ಚು ಮಾರಾಟವಾಗುತ್ತವೆ.

ಆದಾಗ್ಯೂ, ನೆಕ್ಸಾನ್‌ನ ಮೈಲೇಜ್ ಕಡಿಮೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.  ಈ ಕಡಿಮೆ ಮೈಲೇಜ್ ಸಮಸ್ಯೆಯೇ ಇದನ್ನು  ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು , ಟಾಟಾ ಮೋಟಾರ್ಸ್ ನವೀಕರಿಸಿದ ನೆಕ್ಸಾನ್‌ ಬಿಡುಗಡೆ ಮಾಡುತ್ತಿದೆ.  ಮಾರ್ಪಡಿಸಿದ ನೆಕ್ಸಾನ್‌ ಗಾಗಿ ಕಂಪನಿಯು ಹೇಳುತ್ತಿರುವ ಮೈಲೇಜ್  400 ಕಿ.ಮೀ.  ಹೊಸ ನೆಕ್ಸಾನ್ 40 kW ಬ್ಯಾಟರಿಯಿಂದ ಚಾಲಿತವಾಗಲಿದೆ.  ಇದು ಪ್ರಸ್ತುತ ಮಾದರಿಗಿಂತ 30 ಪ್ರತಿಶತ ಹೆಚ್ಚು.  ಪ್ರಸ್ತುತ ಮಾದರಿಯ ಬ್ಯಾಟರಿ 30.2 kW ಆಗಿದೆ.  ನವೀಕರಿಸಿದ ಮಾದರಿಯು ದೊಡ್ಡ ಬ್ಯಾಟರಿಯನ್ನು ಸರಿಹೊಂದಿಸಲು ಬೂಟ್ ಜಾಗದಲ್ಲಿ ಸಣ್ಣ ಬದಲಾವಣೆ  ಹೊರತುಪಡಿಸಿ ಯಾವುದೇ ಮಹತ್ವದ ಆಂತರಿಕ-ಬಾಹ್ಯ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಅದೇ ಸಮಯದಲ್ಲಿ, ಹೊಸ ಮಾದರಿಯು ಬಂದರೂ, ಪ್ರಸ್ತುತ ಮಾದರಿಯು ಮಾರಾಟವನ್ನು ಮುಂದುವರೆಸುತ್ತದೆ.  ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮಾದರಿಯನ್ನು ಆಯ್ಕೆ ಮಾಡಬಹುದು.

ಕಂಪನಿಯು ಪ್ರತಿಪಾದಿಸಿದ ಪ್ರಕಾರ  ಪ್ರಸ್ತುತ ಮಾದರಿಗೆ 312 ಕಿ.ಮೀ.  ಇದ್ದರೂ 200 ರಿಂದ 220 ಕಿ.ಮೀ.  ಮಾತ್ರ ಸಿಗುತ್ತಿದೆ , 400 ಕಿಮೀ ವ್ಯಾಪ್ತಿಯನ್ನು ಹೇಳಿಕೊಳ್ಳುವ ಹೊಸ ಮಾದರಿಯು 300-320 ಕಿಮೀ ವ್ಯಾಪ್ತಿಯನ್ನು ನಿರೀಕ್ಷಿಸಬಹುದು.

ಹೊಸ ಮಾದರಿಯು ವೆಂಟಿಲೇಟೆಡ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ಪಾರ್ಕ್ ಮೋಡ್ ಮತ್ತು EASC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಸಹ ಒಳಗೊಂಡಿರುತ್ತದೆ

ಹೊಸ Nexon EV ಅನ್ನು ಏಪ್ರಿಲ್ 20 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಘೋಷಿಸಿದೆ.  ಸದ್ಯದ ಮಾದರಿಗಿಂತ ಸುಮಾರು 3 ರಿಂದ 4 ಲಕ್ಷ ರೂ.ಗಳಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಕ್ಸಿಜನ್ ಕೊರತೆಯಿಂದ ನವಜಾತ ಶಿಶು ಸಾವು

ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸಪಡಿಸಿಕೊಳ್ಳುತ್ತಿದೆ: ಪ್ರಕಾಶ್ ಕಾರಟ್

ಹತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಷೇಧ ಮಾಡಿದ  ಗೂಗಲ್

ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ

ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು  | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?

ಇತ್ತೀಚಿನ ಸುದ್ದಿ