ಮೇಘಾಲಯದಲ್ಲಿ ಠಾಣೆ ಮೇಲೆ ಕಳ್ಳಸಾಗಾಣೆದಾರರಿಂದ ದಾಳಿ: ದಾಳಿಕೋರರಿಗೆ ಬಿಎಸ್ಎಫ್ ಯೋಧರು ನೀಡಿದ ಪ್ರತ್ಯುತ್ತರ ಹೇಗಿತ್ತು..? - Mahanayaka

ಮೇಘಾಲಯದಲ್ಲಿ ಠಾಣೆ ಮೇಲೆ ಕಳ್ಳಸಾಗಾಣೆದಾರರಿಂದ ದಾಳಿ: ದಾಳಿಕೋರರಿಗೆ ಬಿಎಸ್ಎಫ್ ಯೋಧರು ನೀಡಿದ ಪ್ರತ್ಯುತ್ತರ ಹೇಗಿತ್ತು..?

26/06/2023

ಮೇಘಾಲಯದ ಪೂರ್ವ ಖಾಸಿ ಜಿಲ್ಲೆಯ ದಾವ್ಕಿ ಪಟ್ಟಣದ ಬಳಿಯ ಉಮ್ಸಿಯೆಮ್ ಗ್ರಾಮದಲ್ಲಿರೋ ಗಡಿಭಾಗದ ಠಾಣೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಸೇರಿದ್ದಾರೆ.

ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಉದ್ದೇಶಿಸಿರುವ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಕ್ಕೆ ಕಳ್ಳಸಾಗಣೆದಾರರು ಹೊರಠಾಣೆಯ ಮೇಲೆ ದಾಳಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ನಾವು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಉದ್ದೇಶಿಸಿರುವ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಕಳ್ಳಸಾಗಣೆದಾರರು ಹೊರಠಾಣೆಯ ಮೇಲೆ ದಾಳಿ ಮಾಡಲು ಜನಸಮೂಹವನ್ನು ಪ್ರಚೋದಿಸಿದ್ದಾರೆ. ಇದೇ ವೇಳೆ ಬಿಎಸ್ಎಫ್ ಸಿಬ್ಬಂದಿ ಗುಂಡುಗಳನ್ನು ಹಾರಿಸುವ ಮೂಲಕ ಎದಿರೇಟು ನೀಡಿದ್ದಾರೆ ಎಂದು ಬಿಎಸ್ಎಫ್ ಮೇಘಾಲಯ ಫ್ರಾಂಟಿಯರ್ನ ಇನ್ಸ್ ಪೆಕ್ಟರ್ ಜನರಲ್ ಪ್ರದೀಪ್ ಕುಮಾರ್ ಹೇಳಿದ್ದಾರೆ.

ಸುಮಾರು 2.7 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಬಟ್ಟೆಗಳನ್ನು ಸೈನಿಕರು ವಶಪಡಿಸಿಕೊಂಡಿದ್ದಾರೆ. ಅದೇ ಗ್ರಾಮದಲ್ಲಿ ಕಳ್ಳಸಾಗಣೆದಾರರು ಎಸೆದಿದ್ದ 50,000 ರೂಪಾಯಿ ಮೌಲ್ಯದ ಸೀರೆಗಳನ್ನು ರಾತ್ರಿ ಬಿಎಸ್ಎಫ್ ವಶಪಡಿಸಿಕೊಂಡಿದೆ ಎಂದು ಬಿಎಸ್ಎಫ್ ವಕ್ತಾರರು ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಇಬ್ಬರು ಬಿಎಸ್ಎಫ್ ಸಿಬ್ಬಂದಿಗೆ ಗುಂಪು ಕಲ್ಲು ತೂರಾಟ ನಡೆಸಿದೆ. ಕೆಲವು ಗ್ರಾಮಸ್ಥರು ಹೊರಠಾಣೆಯನ್ನು ಪ್ರವೇಶಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ. ಆದಾಗ್ಯೂ, ಬಿಎಸ್ಎಫ್ ಪಡೆಗಳು ಅವರನ್ನು ಹಿಮ್ಮಟ್ಟಿಸುವಲ್ಲಿ ಯಶಸ್ವಿಯಾದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ