ವಿದಾಯ? ಇನ್ಮುಂದೆ‌ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಶರದ್ ಪವಾರ್ ಹೇಳಿಕೆ - Mahanayaka
2:25 PM Saturday 13 - September 2025

ವಿದಾಯ? ಇನ್ಮುಂದೆ‌ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಶರದ್ ಪವಾರ್ ಹೇಳಿಕೆ

05/11/2024

ಇನ್ಮುಂದೆ ನಾನು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್ ಪಕ್ಷ ಎಸ್​ಪಿ ಬಣದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. 57 ವರ್ಷಗಳ ಕಾಲ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿರುವ ಪವಾರ್​ಗೆ ಮುಂದಿನ ತಿಂಗಳು 84 ವರ್ಷ ವಯಸ್ಸಾಗಲಿದೆ.
ಎನ್​ಸಿಪಿ – ಎಸ್​ಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಮೊಮ್ಮಗ ಯುಗೇಂದ್ರ ಎಸ್ ಪವಾರ್ ಅವರ ಪರವಾಗಿ ಪುಣೆಯ ಶಿರ್ ಸುಫಲ್ ಗ್ರಾಮದಲ್ಲಿ ನಡೆದ ‘ಸ್ವಾಭಿಮಾನ್’ ಚುನಾವಣಾ ರ್ಯಾಲಿಯಲ್ಲಿ ಪವಾರ್ ಮಾತನಾಡಿದರು.


Provided by

ಯುಗೇಂದ್ರ ಎಸ್ ಪವಾರ್ ಪ್ರತಿಷ್ಠಿತ ಬಾರಾಮತಿ ಕ್ಷೇತ್ರದಲ್ಲಿ ತಮ್ಮ ಚಿಕ್ಕಪ್ಪ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಬಾರಾಮತಿ (ಪುಣೆಯ) ಜನರು ತಮ್ಮನ್ನು ದಾಖಲೆಯ 14 ಬಾರಿ ವಿಧಾನಸಭೆ ಮತ್ತು ಲೋಕಸಭೆಗೆ ಸತತವಾಗಿ ಆಯ್ಕೆ ಮಾಡಿದ್ದಕ್ಕೆ ಜನತೆಗೆ ವಿನಮ್ರರಾಗಿ ವಂದಿಸಿದ ಅವರು, ತಾವು ಪ್ರತಿಷ್ಠಿತ ದೇಶೀಯ ಮತ್ತು ಜಾಗತಿಕ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ಸಿಎಂ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.
ನಾನು ಇಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ.

ನಂತರ ಕ್ಷೇತ್ರವನ್ನು ಅಜಿತ್ ಪವಾರ್ ರಿಗೆ ಹಸ್ತಾಂತರಿಸಿದೆ. ಅವರ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ. ಅವರು ಸುಮಾರು 30 ವರ್ಷಗಳ ಕಾಲ ಬಾರಾಮತಿ ಸ್ಥಾನವನ್ನು ಮುನ್ನಡೆಸಿದರು. ಮುಂದಿನ ಮೂರು ದಶಕಗಳವರೆಗೆ ಅಧಿಕಾರ ವಹಿಸಿಕೊಳ್ಳಬಹುದಾದ ಯುವ, ಕ್ರಿಯಾತ್ಮಕ ನಾಯಕತ್ವವನ್ನು ಸಿದ್ಧಪಡಿಸುವ ಸಮಯ ಈಗ ಬಂದಿದೆ” ಎಂದು ಹಿರಿಯ ರಾಜಕಾರಣಿ ಪವಾರ್ ಹೇಳಿದರು. ಈ ನಿರ್ದಿಷ್ಟ ಗುರಿಯನ್ನು ಗಮನದಲ್ಲಿಟ್ಟುಕೊಂಡು ಯುಗೇಂದ್ರ ಎಸ್ ಪವಾರ್ ರನ್ನು ಕಣಕ್ಕಿಳಿಸಲಾಗಿದೆ ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ