ರಾಮ ಮತ್ತು ಲಕ್ಷ್ಮಣರನ್ನು ಬೇರ್ಪಡಿಸಲು ರಾವಣನಿಗೆ ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಕಿಡಿಕಾರಿದ ಮನೀಶ್ ಸಿಸೋಡಿಯಾ - Mahanayaka
12:08 PM Monday 15 - December 2025

ರಾಮ ಮತ್ತು ಲಕ್ಷ್ಮಣರನ್ನು ಬೇರ್ಪಡಿಸಲು ರಾವಣನಿಗೆ ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಕಿಡಿಕಾರಿದ ಮನೀಶ್ ಸಿಸೋಡಿಯಾ

22/09/2024

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ಅವರು, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನಮ್ಮನ್ನು ಪರಸ್ಪರ ಬೇರ್ಪಡಿಸಲು ಹಲವಾರು ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಈಗ ರದ್ದುಪಡಿಸಲಾದ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ತಮ್ಮ ಸಮಯವನ್ನು ನೆನಪಿಸಿಕೊಂಡ ಸಿಸೋಡಿಯಾ, ಕೇಜ್ರಿವಾಲ್ ಅವರ ಹೆಸರನ್ನು ಹೇಳಿದ್ರೆ ಅವರನ್ನು ಉಳಿಸಲಾಗುವುದು ಎಂದು ಜೈಲಿನಲ್ಲಿ ತಿಳಿಸಲಾಯಿತು ಎಂದು ಹೇಳಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಜನತಾ ಕಿ ಅದಾಲತ್ (ಜನರ ನ್ಯಾಯಾಲಯ) ಎಂಬ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಎಎಪಿ ನಾಯಕ ತಾನು ಜೈಲಿನಲ್ಲಿದ್ದಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷಾಂತರ ಮಾಡಲು ಪ್ರಸ್ತಾಪಗಳನ್ನು ನೀಡಿತು. ಇದಕ್ಕೆ ಅವರು “ರಾಮನನ್ನು ಲಕ್ಷ್ಮಣನಿಂದ ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ಮದ್ಯ ನೀತಿ ಹಗರಣದ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ನನ್ನನ್ನು ಸಿಲುಕಿಸಿದ್ದಾರೆ ಎಂದು ನಮಗೆ ತಿಳಿದಿದೆ. ಜೈಲಿನಲ್ಲಿ ನನಗೆ ಹೇಳಲಾಯಿತು, ‘ಕೇಜ್ರಿವಾಲ್ ಹೆಸರು ಹೇಳಿ. ನೀವು ರಕ್ಷಿಸಲ್ಪಡುತ್ತೀರಿ’. ಬಿಜೆಪಿಯವರು ನನ್ನ ಬಳಿಗೆ ಬಂದಾಗ, ನೀವು ಲಕ್ಷ್ಮಣನನ್ನು ರಾಮನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ನಾನು ಉತ್ತರಿಸುತ್ತಿದ್ದೆ. ಲಕ್ಷ್ಮಣನನ್ನು ರಾಮನಿಂದ ಬೇರ್ಪಡಿಸುವ ಶಕ್ತಿ ವಿಶ್ವದ ಯಾವುದೇ ರಾವಣನಿಗೆ ಇಲ್ಲ” ಎಂದು ಸಿಸೋಡಿಯಾ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ